gulbargametro

ದೇವರಾಜ್ ಅರಸು ಜಯಂತಿ ಆಚರಣೆ

ಜೇವರ್ಗಿ ೨೦ : ತಾಲ್ಲೂಕಾ ಆಡಳಿತ ವತಿಯಿಂದ. ಹಾಗೂ ತಾಲ್ಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮಿನಿ ವಿಧಾನ ಸೌಧದಲ್ಲಿ ಇಂದು ಡಿ. ದೇವರಾಜ ಅರಸು ಅವರ ೧೧೦ ನೇ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ತಹಶೀಲ್ದಾರ ಮಲ್ಲಣ್ಣ ಯಲಗೋಡ ಅವರು ಮಾತನಾಡಿ ಉಳುವವನೇ ಭೂ ಒಡೆಯ ಎಂಬ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದು ದಲಿತರಿಗೆ ಹಿಂದುಳಿದವರ್ಗದವರಿಗೆ ಭೂಹೀನರಿಗೆ ಬಡವರಿಗೆ ಭೂಮಿಯನ್ನು ನೀಡಿ ಭೂ ಕ್ರಾಂತಿಯನ್ನೇ ಮಾಡಿದ ಹೆಮ್ಮೆಯ ನಾಯಕ ಮತ್ತು ಹಿಂದುಳಿದವರ್ಗದ ಕಣ್ಣಾಗಿ ರಾಜ್ಯದ…

Read More

ದೇವರಾಜ್ ಅರಸ್ ನಾಡು ಕಂಡ ಅಪರೂಪದ ರಾಜಕಾರಣಿ: ಹೊನ್ನಯ್ಯ ಕೊಂಕಲ್

ವಡಗೇರಾ: ಮಾಜಿ ಮುಖ್ಯಮಂತ್ರಿ ಡಿ ದೇವರಾಜ್ ಅರಸ್ ರವರು ನಾಡುಕಂಡ ಅಪರೂಪದ ರಾಜಕಾರಣಿ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಎಂದು ಪ್ರಾಂಶುಪಾಲ ಹೊನ್ನಯ್ಯ ಕೊಂಕಲ್ ಹೆಳಿದರು. ಪಟ್ಟಣದ ಡಿಡಿಯು ಸಿಬಿಎಸ್ ಸಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಡಿ.ಡಿ.ಯು ಸ್ವತಂತ್ರ ಪದವಿ ಪೂರ್ವ ಕಾಲೇಜು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಿ ದೇವರಾಜ್ ಅರಸ್ ರವರ 110ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.ಡಿ ದೇವರಾಜ ಅರಸರು ದೀನ ದಲಿತರ ಆಶಾ ಕಿರಣ್…

Read More

ಕಲಾ ತಂಡಗಳ ಭವ್ಯ ಮೆರವಣಿಗೆ

ಕಲಬುರಗಿ ನಗರದ ನಗರೇಶ್ವರ ಶಾಲೆಯಿಂದ  ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ್ ಅರಸ ಅವರ ಭಾವಚಿತ್ರದ ಮೆರವಣಿಗೆಗೆ  ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್.ಅವರು ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು. ಸಿ.ಇ.ಓ.ಭಂವರ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರು ಇದ್ದರು. ಬಳಿಕ ನಗರೇಶ್ವರ ಶಾಲೆಯಿಂದ ಕಲಾ ತಂಡಗಳ ಭವ್ಯ ಮೆರವಣಿಗೆ ಮೂಲಕ ಹೊರಟು ವೀರಶೈವ ಕಲ್ಯಾಣ ಮಂಟಪಕ್ಕೆ ಬಂದು ತಲುಪಿತು.

Read More

ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಡಿ. ದೇವರಾಜ ಅರಸು-ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ

ಕಲಬುರಗಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸು ರವರು ಸಮಾಜದಲ್ಲಿ ಆರ್ಥಿಕವಾಗಿ ಬಡವರು ನಿರ್ಗತಿಕರು, ಅಲೆಮಾರಿ ಜನಾಂಗದವರನ್ನು ಮತ್ತು ಹಿಂದುಳಿದ ವರ್ಗದ ಜನರ ಅಭಿವೃದ್ದಿಗಾಗಿ ಅವಿರತವಾಗಿ ಶ್ರಮಿಸುವುದರ ಮೂಲಕ ತಮ್ಮ ಸಾಮಾಜಿಕ ಸೇವೆಯನ್ನು ಮಾಡಿದ ಮಹಾನ್ ವ್ಯಕ್ತಿ ಎಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲಬುರಗಿ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯದ…

Read More

ಗಣೇಶ-ಈದ್ ಮಿಲಾದ ಶಾಂತಿ ಸಮಿತಿ ಸಭೆ: ಪರಿಸರ ಸ್ನೇಹಿ ಮಣ್ಣಿನ ಗಣಪ ಪ್ರತಿಷ್ಠಾಪಿಸಿ

ಸೌಹಾರ್ದಯುತವಾಗಿ ಹಬ್ಬ ಆಚರಿಸುವಂತೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಕರೆ ಕಲಬುರಗಿ, : ಸೂಫಿ-ಸಂತರ ನಾಡು ಕಲಬುರಗಿ ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಗಣೇಶ ಚತುರ್ಥಿ ಮತ್ತು ಮಿಲಾದ್ ಉನ್ ನಬಿ ಈದ್-ಎ-ಮಿಲಾದ್ ಹಬ್ಬ ಒಟ್ಟಾಗಿಯೆ ಬಂದಿರುವುದರಿಂದ ಎರಡು ಧರ್ಮೀಯರು ಸೌಹಾರ್ದಯುತವಾಗಿ ಹಬ್ಬ ಆಚರಿಸುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಕರೆ ನೀಡಿದರು. ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಿ.ಓ.ಪಿ. ಗಣಪ ಬಳಸದೆ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಪ್ರತಿಷ್ಠಪಿಸುವ ಮೂಲಕ ಪರಿಸರ ಕಾಳಜಿ…

Read More

ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ

ಚಿಂಚೋಳಿಯ ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ಜರಗಿತು. ಸಭೆ ಉದ್ದೇಶಿಸಿ ಚಿಂಚೋಳಿಯ ಪೊಲೀಸ್ ಠಾಣೆಯ ಸಿಪಿಐ ಕಪಿಲದೇವ್, ಅವರು ಮಾತನಾಡಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಈ ಸಭೆ ಕರೆಯಲಾಗಿದ್ದು ಚಿಂಚೋಳಿ ತಾಲೂಕ ಬಹಳಷ್ಟು ಶಾಂತಿಯತೆಯಿಂದ ಜನರು ಇರುತ್ತಾರೆ ಯಾಕೆಂದರೆ ನಾನು ಒಂದು ವರ್ಷ ಆಯ್ತು ನಾನು ಇಲ್ಲಿ ಸಿಪಿಐ ಆಗಿ ಸೇವೆ ಮಾಡುತ್ತಿದ್ದು ಚಿಂಚೋಳಿಯಲ್ಲಿ ನನ್ನ ವ್ಯಾಪ್ತಿಯಲ್ಲಿ ಯಾವುದೇ ಒಂದು ಗಲಾಟೆ…

Read More

ಕೋನಾರ್ಕ್,ಎಲ್‌ಟಿಟಿ,ಇಂದೋರ್ ಎಕ್ಸಪೇಸ್ ರೈಲುಗಳ ನಿಲುಗಡೆಗೆ ಬಿಜೆಪಿ ಮನವಿ

ಚಿತ್ತಾಪುರ : ಚಿತ್ತಾಪುರ ರೈಲು ನಿಲ್ದಾಣಕ್ಕೆ, 18519/18520-ಲೋಕಮಾನ್ಯ ತಿಲಕ್ (LTT), 11019,11020-ಕೋನಾರ್ಕ್ ಎಕ್ಸ್‌ಪ್ರೆಸ್‌, 20915-20916-ಲಿಂಗಂಪಳ್ಳಿ ಟು ಇಂದೋರ್ ಎಕ್ಸ್‌ಪ್ರೆಸ್ ಚಿತ್ತಾಪುರ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆ ಮಾಡಬೇಕೆಂದು ಇಂದು ದಕ್ಷಿಣ ರೈಲ್ವೆ ಸಿಕಂದರಾಬಾದ್ ಡಿಆರ್ ಎಂ ಅವರಿಗೆ ಬಿಜೆಪಿ ಮುಖಂಡರು ಮನವಿ ಪತ್ರವನ್ನು ಸಲ್ಲಿಸಿದರು. ಚಿತ್ತಾಪುರ ಪಟ್ಟಣದಲ್ಲಿ ಲೋಕಮಾನ್ಯ ತಿಲಕ್ (LTT)-ಕೋನಾರ್ಕ್, -ಲಿಂಗಂಪೈಲಿಯಿಂದ ಇಂದೋರ್ ಎಕ್ಸ್‌ಪ್ರೆಸ್‌ಗೆ ಹೋಗುವ ರೈಲುಗಳು ಚಿತ್ತಾಪುರ ರೈಲು ನಿಲ್ದಾಣದಲ್ಲಿ ನಿಲ್ಲುತ್ತಿಲ್ಲ. ರೈಲುಗಳು ಇಲ್ಲಿ ನಿಲ್ಲದ ಕಾರಣ ಅನೇಕ ಪ್ರಯಾಣಿಕರು ಮತ್ತು ಉದ್ಯಮಿಗಳು ಅನಾನುಕೂಲತೆಯನ್ನುಅನುಭವಿಸುತ್ತಿದ್ದಾರೆ….

Read More

ಅ. ೨೨ ರಂದು ಪಲ್ಲಕ್ಕಿ ಉತ್ಸವ

ಕಲಬುರಗಿ: ತಾಲೂಕಿನ ಶ್ರೀನಿವಾಸ್ ಸರಡಗಿ ಶ್ರೀ ಮಹಾಲಕ್ಷ್ಮೀಶಕ್ತಿ ಪೀಠದಲ್ಲಿ ಶ್ರಾವಣ ಮಾಸದ ಐದನೇ ಶುಕ್ರವಾರ ಅಗಸ್ಟ್ ೨೨ ರಂದು ಬೆಳಿಗ್ಗೆ ೯ ಕ್ಕೆ ಪಲ್ಲಕ್ಕಿ ಉತ್ಸವ ಶ್ರೀ ದೇವಿಗೆ ಮಹಾಭಿಷೇಕ ಮಹಾಲಂಕಾರ ಮಹಾನವಿದ್ಯ ಮತ್ತು ಅರ್ಚನೆ ಹಾಗೂ ಹೋಮ ಹವನ ನಡೆಯಲಿದೆ . ನಂತರ ನಾಡಿನ ಖ್ಯಾತ ಕಲಾವಿದ ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಬಂದ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಗುರುವಂದನ ಕಾರ್ಯಕ್ರಮದಲ್ಲಿ ಎಲ್ಲಾಭಕ್ತಾಧಿಗಳು ಆಗಮಿಸಿ ಮಹಾತಾಯಿ ಮತ್ತು ಪೂಜ್ಯರ ಆಶೀರ್ವಾದ ಪಡೆಯಬೇಕೆಂದು ಶಕ್ತಿ ಪೀಠದ ಕಾರ್ಯದರ್ಶಿ…

Read More

ಶ್ರೀ ರೇವಣಸಿದ್ಧೇಶ್ವರ ಕೋರಿ ಮಠದಲ್ಲಿ ದಂಪತಿಗಳಿಗೆ ಸನ್ಮಾನ

ಕಲಬುರಗಿ ನಗರದ ಶ್ರೀ ರೇವಣಸಿದ್ಧೇಶ್ವರ ಕೋರಿ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಕಳೆದ ಇಪ್ಪತ್ತು ದಿನಗಳಿಂದ ಹಾಲುಮತ ಕುಲದೈವ ಶ್ರೀ ಬೀರಲಿಂಗೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಡಾ.ಅಮರಪ್ಪಾ ಜಂಪಾ ವೈದ್ಯ ದಂಪತಿಗಳಿಗೆ ಸನ್ಮಾನಿಸಲಾಯಿತು ಇದೆ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆ ರವಿಗೊಂಡ ಕಟ್ಟಿಮನಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ವಾರಿಕ, ಯೋಗ ಶಿಕ್ಷಕರಾದ ನಿತ್ಯಾನಂದ ಬಂಡಿ, ಸಂಜೀವಕುಮಾರ ರೇವಣಕರ, ಅಮರ, ವಿಶ್ವರಾಜ ಸೋನಾರ್, ಖ್ಯಾತ ಛಾಯಾಗ್ರಾಹಕ ಮಂಜು ಜಮಾದಾರ, ಮಹೇಶ ಪಾಣೇಗಾಂವ ಉಪಸ್ಥಿತರಿದ್ದರು. ರಜನಿಕಾಂತ್ ಮೆಳಕುಂದಿ…

Read More

ವಿಜೃಂಬಣೆಯಿಂದ ಜರುಗಿದ ಶ್ರೀ ಭೋಗೇಶ್ವರ ರಥೋತ್ಸವ

ತಾಳಿಕೋಟೆ: ತಾಲೂಕಿನ ಹಿರೂರ ಗ್ರಾಮದಲ್ಲಿ ಶ್ರೀ ಭೋಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರರಂದು ಮಹಾ ರಥೋತ್ಸವವು ಸಾವಿರಾರು ಭಕ್ತ ಸಮೂಹದ ಮಧ್ಯ ವಿಜೃಂಬಣೆಯಿಂದ ಜರುಗಿತು. ರಥೋತ್ಸವ ಅಂಗವಾಗಿ ನಸುಕಿನ ಜಾವ ಶ್ರೀ ಭೋಗೇಶ್ವರ ಮಹಾ ಮೂರ್ತಿಗೆ ವೇ.ಜಗನ್ನಾಥ ಜೋಶಿ ಅವರಿಂದ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮಗಳು ಜರುಗಿದವಲ್ಲದೇ ಮುಂಜಾನೆ ೮ ಗಂಟೆಗೆ ಗಂಗಸ್ಥಳದೊಂದಿಗೆ ಕುಂಭ ಕಳಸ ವಾಧ್ಯವೈಭವಗಳೊಂದಿಗೆ ಜರುಗಿ ೧೧ ಗಂಟೆಗೆ ಫಲ್ಲಕ್ಕಿ ಉತ್ಸವವು ಮೇರವಣಿಗೆಯು ಪ್ರಾರಂಭಗೊಂಡು ಶ್ರೀ ಭೋಗೇಶ್ವರ ದೇವಸ್ಥಾನದಿಂದ ಡೋಣಿ ಭೋಗೇಶ್ವರದವರೆಗೆ…

Read More
error: Content is protected !!