ನೈಸರ್ಗಿಕ ವಿಧಾನಗಳ ಅಳವಡಿಸಿ ಹತ್ತಿ ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಕಡಿಮೆ ಮಾಡಲು ಕರೆ
ಯಾದಗಿರಿ, ಸಹಜ ಸಮೃದ್ಧ, ಮತ್ತು ಎಲ್ಡಿಸಿ (LDC) ಇವರ ಸಂಯುಕ್ತ ಆಶ್ರಯದಲ್ಲಿ, ಯಾದಗಿರಿ ತಾಲ್ಲೂಕಿನ ಸೈದಾಪುರ ಹೋಬಳಿಯ ಸಂಗವಾರ ಗ್ರಾಮದಲ್ಲಿ ಹತ್ತಿಯಲ್ಲಿ ಗುಲಾಬಿ ಕಾಯಿ ಕೊರಕ ನಿರ್ವಹಣೆ ಕುರಿತು “ಜಾಗೃತಿ” ಕಾರ್ಯಕ್ರಮ ಏರ್ಪಾಡು ಮಾಡಲಾಗಿತ್ತು. ಸುಸ್ಥಿರ ಮತ್ತು ನೈಸರ್ಗಿಕ ವಿಧಾನಗಳ ಮೂಲಕ ರಾಸಾಯನಿಕಗಳ ಬಳಕೆ ಕಡಿಮೆ ಮಾಡುವ ಅರಿವಿನ ಕಾರ್ಯಕ್ರಮದ ಭಾಗವಾಗಿ ತರಬೇತಿ ನೀಡಲಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಲ್ಡಿಸಿ ಸಂಸ್ಥೆಯ ಸಂಶೋಧನಾ ಎನಾಲಿಸ್ಟ್ ಗಿರೀಶ್ ಮಾತನಾಡಿ ” ಎಲ್. ಡಿ. ಸಿ ಸಂಸ್ಥೆ ಹತ್ತಿ ಕೃಷಿಯಲ್ಲಿ…


