ಜನ್ಮ ದಿನಾಚರಣೆಯ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಕಲಬುರಗಿ : ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಕಾಂಗ್ರೆಸ್ ಪಕ್ಷದ ಕಲಬುರಗಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಶಕೀಲ್ ಅಹಮದ್ ಸರಡಗಿ ಅವರ ನೇತೃತ್ವದಲ್ಲಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಾಗೂ ಕೆಕ್ ಕತ್ತರಿಸುವ ಮಾಡುವುದರ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರ ಜನ್ಮ ದಿನಾಚರಣೆ ಅತಿ ಸರಳತೆಯಿಂದ ಆಚರಣೆ ಮಾಡಿದರು.

ಬಳಿಕ ಮಾತನಾಡಿದ ಯುವ ಘಟಕದ ಅಧ್ಯಕ್ಷ ಶಕೀಲ್ ಅಹಮದ್ ಸರಡಗಿ ಅವರು ರಾಧಾಕೃಷ್ಣ ದೊಡ್ಡಮನಿ ಅವರು ಯಾವಾಗಲೂ ಜನಪರ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಸಂಸದ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಆ ಭಗವಂತ ಆಯುಷ್ ಆರೋಗ್ಯ ಸಮೃದ್ಧಿ ಕೊಟ್ಟು ಕಾಪಾಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಘಟಕದ ಮಾಜಿ ಅಧ್ಯಕ್ಷ ಶಿವಾನಂದ ಹೊನಗುಂಟಿ, ಈರಣ್ಣಾ ಪಾಟೀಲ್ ಝಳಕಿ, ಎನ್‌ಎಸ್‌ಯುಐ ಕಲಬುರಗಿ ಜಿಲ್ಲಾ ಅಧ್ಯಕ್ಷ ಗೌತಮ್ ಕರಿಕಲ್, ಮೊಹಮ್ಮದ್ ಅಸ್ವಾನ್, ರಾಮಪ್ರಸಾದ್ ಕಾಂಬಳೆ, ಗಣೇಶ ನಾಗೇನಹಳ್ಳಿ. ಟೈಗರ್ ವಿಘ್ನೇಶ್ವರ, ಸಂಘಪಾಲ್ ಕಾಂಬಳೆ, ರಾಜು ಮಾಳಿಗೆ, ಅಜಾಜ್, ಅಸ್ಲಾಂ ಸಿಂದಗಿ, ಕಾರ್ತಿಕ ಹೊಸಮನಿ, ಎಸ್ ಕೆ ಶೋಯೆಬ್, ಶೇಖ್ ಸಮ್ರೀನ್, ಸಹೇರಾ ಬಾನು, ಖರಮ್ ಕಲ್ಯಾಣಿ, ಅಸಿಮ್ ಪಟೇಲ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಯುವ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!