ನಾನು ಶಾಸಕನಲ್ಲ ,ನಿಮ್ಮ ಸೇವಕ- ಅಲ್ಲಮಪ್ರಭು ಪಾಟೀಲ

ಕಲಬುರಗಿ : ನಾನು ಶಾಸಕನಲ್ಲ ,ನಿಮ್ಮ ಸೇವಕ- ನನ್ನನ್ನು ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ತಮಗೆ ಯಾವತ್ತಿಗೂ ಚಿರ ಋಣಿ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಹೇಳಿದರು. ಸದಾಶಿವ ನಗರದ ಶ್ರೀ ಗಣೇಶ ಮಂದಿರ ಗಣೇಶ ವಿಸರ್ಜನಾ ದಿನದಂದು ಬಡಾವಣೆಯಲ್ಲಿ ಹತ್ತನೇ ಮತ್ತು ಪಿ.ಯು.ಸಿ‌.ಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ…

Read More

ಅ.31ಕ್ಕೆ ಮಾಲಾ ಕಣ್ಣಿ ಅಭಿನಂದನಾ ಸಮಾರಂಭ

ನಾರಿ ಶಕ್ತಿ ಪ್ರಶಸ್ತಿ ಪ್ರಧಾನ ಹಾಗೂ ನೇತ್ರದಾನ ಶಿಬಿರ ಕಲಬುರ್ಗಿ: ಸಮಾಜ ಸೇವಕಿ ಹಾಗೂ ಪರಿಸರ ಪ್ರೇಮಿ ಮಾಲಾ ಕಣ್ಣಿ ಅವರ ಅಭಿನಂದನ ಸಮಾರಂಭವನ್ನು ಅ. 31 ರಂದು ಕಲ್ಬುರ್ಗಿ ನಗರದ ಚೇಂಬರ ಆಫರ್ ಕಾಮರ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಭಿನಂದನಾ ಸಮಾರಂಭದ ಸಂಚಾಲಕ ಸುರೇಶ ಬಡಿಗೇರ ಇಂದಿಲ್ಲಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ದಶಕಗಳಿಂದ ನಿರಂತರವಾಗಿ ಸಮಾಜ ಸೇವೆ ಮಾಡುವುದರೊಂದಿಗೆ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಸಸಿಗಳನ್ನು…

Read More

ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯ ಘಟಕದಲ್ಲಿ ಸ್ಥಾಪಿತವಾದ ನೂತನ ಶ್ವಾನದಳಕ್ಕೆ 05 ಶ್ವಾನಗಳ ಸೇರ್ಪಡೆ

ಕಲಬುರಗಿ ನಗರ ಪೊಲೀಸ ಆಯುಕ್ತಾಲಯಕ್ಕೆ ಹೆಚ್ಚುವರಿ ಪೊಲೀಸ ಮಹಾನಿರ್ದೇಶಕರು (ಕಾ ಮತ್ತು ಸು)ಆರ್ ಹಿತೇಂದ್ರ., ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಕಲಬುರಗಿ ನಗರ ಪೊಲೀಸ ಆಯುಕ್ತಾಲಯ ಘಟಕಕ್ಕೆ ನೂತನ ಶ್ವಾನದಳದ ಮನವಿಯನ್ನು ಪೊಲೀಸ ಆಯುಕ್ತರಾದ ಡಾ. ಶರಣಪ್ಪ ಎಸ್ ಡಿ., ಅವರು ಸಲ್ಲಿಸಿದ್ದರು. ಪೊಲೀಸ ಆಯುಕ್ತರ ಮನವಿಗೆ ಸ್ಪಂದಿಸಿದ ಹಿರಿಯ ಅಧಿಕಾರಿಗಳು ಕೂಡಲೇ ೦೫ ಶ್ವಾನಗಳನ್ನು ಮಂಜೂರಿಸಿರುತ್ತಾರೆ. ಸದರಿ ಶ್ವಾನಗಳಿಗೆ ನಗರ ಪೊಲೀಸ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ., ಹಾಗೂ ಉಪ-ಪೊಲೀಸ ಆಯುಕ್ತರಾದ ಕನಿಕಾ ಸಿಕ್ರಿವಾಲ್, ಸೇರಿದಂತೆ…

Read More

ಕೈಗಾರಿಕಾ ತರಬೇತಿ ಕೇಂದ್ರಗಳು ನಿರುದ್ಯೋಗ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರಗಳಾಗಿವೆ | ಬಿ ಆರ್ ಪಾಟೀಲ್

ಕಲಬುರ್ಗಿ: ಕೈಗಾರಿಕಾ ತರಬೇತಿ ಕೇಂದ್ರಗಳು ನಿರುದ್ಯೋಗ ಸಮಸ್ಯೆಗಳನ್ನು ಪರಿಹರಿಸುವ ಸಂಜೀವಿನಿಗಳಾಗಿವೆ ಎಂದು ಕರ್ನಾಟಕ ಸರ್ಕಾರದ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ ಆರ್ ಪಾಟೀಲ್ ಅವರು ಹೇಳಿದರು. ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕೈಗಾರಿಕಾ ತರಬೇತಿ ಕೇಂದ್ರ ನಿಂಬರ್ಗಾ ಕಲಬುರಗಿಯ, ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕೈಗಾರಿಕಾ ತರಬೇತಿ ಕೇಂದ್ರಗಳು ವ್ಯಕ್ತಿಗಳಿಗೆ ಉದ್ಯೋಗ ಪಡೆಯಲು ಅಗತ್ಯವಾದ ನೈಜ-ಜಗತ್ತಿನ ಕೌಶಲ್ಯಗಳನ್ನು ನೀಡುತ್ತವೆ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಜನರಿಗೆ ಉದ್ಯೋಗ ನೀಡುವಂತಾಗಲಿ ಎಂದು ಹೇಳಿದರು….

Read More

ಅತಿವೃಷ್ಟಿಯಿಂದಾದ ತೊಗರಿ ಸೇರಿದಂತೆ ಮುಂಗಾರು ಬೆಳೆ ಹಾನಿಗೆ ಎಕರೆಗೆ 25 ಸಾವಿರ ನೀಡಲು ಅಂಬಾರಾಯ ಅಷ್ಠಗಿ‌| ಆಗ್ರಹ

ಕಲಬುರಗಿ : ಅತಿವೃಷ್ಟಿಯಿಂದಾದ ತೊಗರಿ ಸೇರಿದಂತೆ ಮುಂಗಾರು ಬೆಳೆ ಹಾನಿಗೆ ಎಕರೆಗೆ 25,000 ಸಾವಿರ ರೂ.ಗಳ ಪರಿಹಾರ ನೀಡಲು ಮುಖಂಡ ಅಂಬಾರಾಯ ಅಷ್ಠಗಿ‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು ಅವರು ನಗರದ ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಗಸ್ಟ್ ತಿಂಗಳನಲ್ಲಿ, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮುಂಗಾರು ಬೆಳೆಗಳಾದ, ತೋಗರಿ, ಹೆಸರು, ಉದ್ದು, ಸೋಯಾಬೀನ್, ಎಳ್ಳು, ಹತ್ತಿ, ಸೇರಿದಂತೆ ಇನ್ನೂ ಅನೇಕ ಬೆಳೆಗಳು ಇತ್ತಿಚಿನ ಭೀಕರ ಮಳೆಗೆ ಸಂಪೂರ್ಣ ನಾಶವಾಗಿವೆ. ಸುಮಾರು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ…

Read More

ಪರಿಸರ ಸ್ನೇಹಿ ಗಣಪತಿ ವಿಗ್ರಹಗಳ ತಯಾರಿಕೆ

ಕಲಬುರಗಿ: ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು  ಮಹಾವಿದ್ಯಾಲಯದ ಆವರಣದಲ್ಲಿ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳು ತಯಾರಿಕೆ ಮಾಡಿದರು. ಈ ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ರಾಜೇಂದ್ರ ಕೊಂಡಾ ಅವರು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂದು ಪರಿಸರ ರಕ್ಷಣೆ ಮಾಡುವದು ನಮ್ಮೆಲ್ಲರ ಹೊಣೆ, ನಾವು ಆದಷ್ಟು ಪರಿಸರ ರಕ್ಷಣೆ ಮಾಡಬೇಕು. ಈ ಕಾರಣಕ್ಕಾಗಿಯೇ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಕಲಿಕೆಯ ಜೊತೆಗೆ ಅವರಲ್ಲಿರುವ ಕೌಶಲ್ಯ ಅಭಿವೃದ್ಧಿಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು…

Read More

ಶ್ರಾವಣ ಮಾಸದ ನಿಮಿತ್ಯ ಅನ್ನ ದಾಸೋಹ ಕಾರ್ಯಕ್ರಮ

ಕಲಬುರಗಿ : ಸಂಮಿತ್ರ ಸೇವಾ ಸಹಕಾರ ಸಂಘದ ವತಿಯಿಂದ ಶ್ರಾವಣ ಮಾಸದ ನಿಮಿತ್ಯ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಪಟ್ಟಣ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷ ಪಾಟೀಲ್ ಧಣ್ಣೂರ್ ಅವರು ಚಾಲನೆ ನೀಡಿದರು. ದಾಸೋಹ ಸೇವೆಯ ಪವಿತ್ರ ಕಾರ್ಯದಲ್ಲಿ ಸಂಘದ ಅಧ್ಯಕ್ಷ ಪ್ರಕಾಶ್ ರೋಳೆ, ಉಪಾಧ್ಯಕ್ಷರಾದ ವ್ಹಿ ಎ ಪಾಟೀಲ್ ಸಿಂದಗಿ, ಕಾರ್ಯದರ್ಶಿ ಚನ್ನಪ್ಪ ಪಾಟೀಲ್, ಸಹಕಾರ್ಯದರ್ಶಿ  ಮಡಿವಾಳ ಭೈರಾಮಡಗಿ, ನಿರ್ದೇಶಕ ನಾಗರಾಜ್ ಬಂಗೂರ್, ಸಂತೋಷ ಬೆಣ್ಣೂರ್, ರಾಚಪ್ಪ ರೋಳೆ, ಕೆ ಸಿ ರೋಳೆ, ಅಸ್ಲಾಂ ಸಿಂದಗಿ,…

Read More

ರಾಘವೇಂದ್ರ ನಗರ ಪೊಲೀಸರ ಕಾರ್ಯಾಚರಣೆ | 2.75 ಲಕ್ಷ ರೂ ಮೌಲ್ಯದ ವಿವಿಧ ಕಂಪನಿಯ 06 ದ್ವಿ-ಚಕ್ರ ವಾಹನಗಳ ವಶಕ್ಕೆ

ಕಲಬುರಗಿ : ರಾಘವೇಂದ್ರ ನಗರ ಪೊಲೀಸರ ಕಾರ್ಯಾಚರಣೆ ನಡೆಸಿ, 2,75,000/-ರೂ ಮೌಲ್ಯದ ವಿವಿಧ ಕಂಪನಿಯ 06 ದ್ವಿ-ಚಕ್ರ ವಾಹನಗಳ ವಶಕ್ಕೆ ಪಡೆದು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿತನಾದ ಗುಲಾಮ ಅಲಿ ಹುಸೇನಿ ಕಾಲೋನಿ ಚಿದ್ರಿ ರೋಡ ಬೀದರ ಇತನನ್ನು ವಶಕ್ಕೆ ಪಡೆದುಕೊಂಡು ಸದರಿ ಆರೋಪಿತನಿಗೆ ಕೂಲಂಕುಶವಾಗಿ ವಿಚಾರಣೆಗೊಳಪಡಿಸಿದಾಗ ಆರೋಪಿತನು ಕಲಬುರಗಿ ನಗರದ ವಿವಿಧ ಸ್ಥಳದಲ್ಲಿ ಕಳ್ಳತನ ಮಾಡಿದ ಬಗ್ಗೆ ತನ್ನೊಪ್ಪಿಕೊಂಡಿದ್ದು, ಆರೋಪಿತನಿಂದ ಒಟ್ಟು 06 ವಿವಿಧ ಕಂಪನಿಯ ಮೋಟರ್ ಸೈಕಲ್‌ಗಳು 2,75,000/- ರೂಪಾಯಿ ಮೌಲ್ಯದ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ….

Read More

ವಿಭಾಗೀಯ ಉಪಾಧ್ಯಕ್ಷರಾಗಿ ನೀಜಲಿಂಗಪ್ಪ ಕೊರಳ್ಳಿ ಆಯ್ಕೆ.

ಕಲಬುರಗಿ; ವಿಭಾಗೀಯ ರಾಜ್ಯ ಸರಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷರಾಗಿ ಪಶು ಸಂಗೋಪನೆ ಇಲಾಖೆಯ ನಿಜಲಿಂಗಪ್ಪ ಕೊರಳ್ಳಿ ಅವರನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಢಕ್ಷರಿ ಅವರು ಇಂದು ನೇಮಕಗೊಳಿಸಿ ಆದೇಶಿಸಿದ್ದಾರೆ.ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರಿಗೌಡರ, ರಾಜ್ಯ ಗೌರವಾಧ್ಯಕ್ಷ ಬಸವರಾಜು, ಸಚಿವಾಲಯ ನೌಕರರ ಸಂಘದ ರಾಜ್ಯಾಧ್ಯಕ್ಷ ರಮೇಶ ಸಂಗಾ,ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಜಿಲ್ಲಾ ಕಾರ್ಯದರ್ಶಿ ಮಹೇಶ ಹೂಗಾರ ರಾಜ್ಯ ಪರಿಷತ್ ಸದಸ್ಯರಾದ ಧರ್ಮರಾಯ ಜವಳಿ, ಕಾರ್ಯಾಧ್ಯಕ್ಷ ಚಂದ್ರಕಾಂತ ಏರಿ, ಹಿರಿಯ ಉಪಾಧ್ಯಕ್ಷ…

Read More

ಬೈಕ್ ಕಳ್ಳನ ಬಂಧನ | ವಿವಿಧ ಕಂಪನಿಯ 6 ಮೋಟರ ಸೈಕಲ್ ಜಪ್ತಿ

ಕಲಬುರಗಿ : ವಿವಿಧ ಕಂಪನಿಯ 6 ಮೋಟರ ಸೈಕಲ್ ಜಪ್ತಿ ಮಾಡಿ ಬೈಕ್ ಕಳ್ಳತನ ಮಾಡುತ್ತಿರುವ  ಒಬ್ಬ ಆರೋಪಿಯನ್ನು ರಾಘವೇಂದ್ರ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ನಗರ ಪೊಲೀಸ್ ಆಯುಕ್ತ,ಡಾ ಶರಣಪ್ಪಾ ಎಸ.ಡಿ ಡಿಸಿಪಿ ಕನಿಕಾ ಸಿಕ್ರಿವಾಲ್, ಡಿಸಿಪಿ ಪ್ರವೀಣ ನಾಯಕ,ಎಸಿಪಿ ಶರಣಬಸಪ್ಪ ಸುಬೇದಾರ ಅವರ ಮಾರ್ಗದರ್ಶನದಲ್ಲಿ  ಸಿಪಿಐ ದಿಲೀಪಕುಮಾರ ಬಿ ಸಾಗರ ನೇತೃತ್ವದ ತಂಡ, ಗುಲಾಮ ಅಲಿ ಫಾರುದ್ದೀನ ಹುಸೇನಿ ಕಾಲೋನಿ ಚಿದ್ರಿ ರೋಡ ಬೀದರ ಈತನನ್ನು ವಶಕ್ಕೆ ಪಡೆದುಕೊಂಡು ಸದರಿ ಆರೋಪಿತನಿಂದ…

Read More
error: Content is protected !!