ಗೌರಿಗಣೇಶ ಈದ್ ಮಿಲಾದ್ ಹಬ್ಬದ ನಿಮಿತ್ಯ ಶಾಂತಿ ಸಭೆ

ಹಿಂದೂ ಮುಸ್ಲಿಮರು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಲು ಮನವಿ

ಯಾದಗಿರಿ : ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವನ್ನು ಸೌಹಾರ್ದತಿವಾಗಿ ಆಚರಿಸುವಂತೆ ವಡಗೇರಾ ಪೊಲೀಸ್ ಠಾಣೆ ಪಿಎಸ್ಐ  ಮೈಬೂಬ ಅಲಿ ಹೇಳಿದರು. 

ಜಿಲ್ಲೆಯ ವಡಗೇರಾ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಈದ್ ಮಿಲಾದ್ ಹಬ್ಬದ ಪ್ರಯುಕ್ತ  ಹಮ್ಮಿಕೊಂಡಿದ್ದ ತಾಲೂಕಿನ ಸಾರ್ವಜನಿಕರ ಶಾಂತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹಬ್ಬಗಳ ಆಚರಣೆಯಲ್ಲಿ ಯಾವುದೇ ರೀತಿಯಾದ ಕೋಮುಗಲಭೆ  ಸೃಷ್ಟಿಯಾಗದಂತೆ ಶಾಂತಿಯುತವಾಗಿ ಆಚರಿಸಬೇಕು. ಮತ್ತು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪಟ್ಟಣದ ಹಿರಿಯ ಮುಖಂಡರಾದ ಸಿದ್ದಣ್ಣಗೌಡ ಕಾಡಂನೋರ್, ಯಂಕಪ್ಪ ಬಸಂತಪುರ, ಮಹಮ್ಮದ್ ಖುರೆಶಿ,ರಂಗಯ್ಯ ಮಸ್ತಾಜೀರ ಮೈಬೂಬ್ ತುಮಕೂರ್, ದೊಡ್ಡಯ್ಯ ಕಾಡಂಗೇರಾ, ಸಾಬಣ್ಣ ಐಕೂರ, ಮೈಬೂಬ್ ಖುರೇಶಿ, ಇಮಾಮ್ ಸಾಬ್,ಮಲ್ಲಪ್ಪ ಮಾಗನೂರ್,ಹೊನ್ನಪ್ಪ ಕಡಚೂರ್, ಅಜ್ಮೀರ್ ಭಾಷಾ ನೂರಬಾಯಿ, ಹಾಗೂ ವಿವಿಧ ಸಂಘಟನೆಯ ಮುಖಂಡರು ವಿವಿಧ ಗ್ರಾಮಸ್ಥರು ಪೊಲೀಸ್ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು​.

Leave a Reply

Your email address will not be published. Required fields are marked *

error: Content is protected !!