ಸುರಪುರ: ಇದೇ ಸಪ್ಟೆಂಬರ್ ೧ ರಿಂದ ಬಸವನಬಾಗೇವಾಡಿಯಲ್ಲಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಚಾಲನೆ ದೊರೆಯಲಿದ್ದು ಸಪ್ಟೆಂಬರ್ ೪ಕ್ಕೆ ಯಾದಗಿರಿಗೆ ಆಗಮಿಸಲಿದೆ. ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಗುರುಮಠಕಲ್ ಖಾಸಾ ಮಠದ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮೀಜಿ ತಿಳಿಸಿದರು.
ನಗರದ ರಂಗAಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಸಪ್ಟೆಂಬರ್ ೧ ರಂದು ಬಸವನಬಾಗೇವಾಡಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದ್ದು,೪ ರಂದು ಯಾದಗಿರಿ ನಗರಕ್ಕೆ ಆಗಮಿಸುವ ಅಭಿಯಾನ ಎಸ್.ಎನ್ ಪಾಟೀಲ್ ಕಲ್ಯಾಣ ಮಂಟಾಪದಲ್ಲಿ ಬೆಳಿಗ್ಗೆ ೧೦ ಗಂಟೆಗೆ ವಿದ್ಯಾರ್ಥಿಗಳೊಂದಿಗೆ ವಚನ ಸಂವಾದದಲ್ಲಿ ಶರಣ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಹಾಗೂ ಹುಲಿಕಲ್ ನಟರಾಜ ಅವರಿಂದ ಅನುಭಾವ, ನಂತರ ಸಂಜೆ ೪ ಗಂಟೆಗೆ ಸುಭಾಷ್ ವೃತ್ತದಲ್ಲಿ ಅಭಿಯಾನದ ಅಂಗವಾಗಿ ಬಸವರಥಕ್ಕೆ ಸ್ವಾಗತ ನಂತರ ಸಾಮರಸ್ಯ ನಡೆಗೆ ನಡೆಯಲಿದೆ,ಸಂಜೆ ೬ ಗಂಟೆಗೆ ಕಲ್ಯಾಣ ಮಂಟಪದಲ್ಲಿ ಹಂದಿಗುAದ ಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿಯವರಿಂದ ಉಪನ್ಯಾಸ,ಶರಣ ಸಿದ್ದು ಯಾಪಲಪರವಿ ಅವರಿಂದ ಮಾತೆಂಬುದು ಜ್ಯೋತಿರ್ಲಿಂಗ ಕುರಿತು ಉಪನ್ಯಾಸ ಹಾಗೂ ರಾತ್ರಿ ಜಂಗಮದೆಡೆಗೆ ನಾಟಕ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಾಡೋಜ ಡಾ.ಬಸಲಿಂಗ ಪಟ್ಟದ್ದೇವರು ಭಾಲ್ಕಿ,ಶ್ರೀ ತೋಂಟದಾರ್ಯ ಸಿದ್ದರಾಮ ಮಹಾಸ್ವಾಮೀಜಿ ಗದಗ,ಡಾ.ಪಂಡೀತಾರಾಧ್ಯ ಶಿವಾಚಾರ್ಯರು ಸಾಣೇಹಳ್ಳಿ,ಶ್ರೀ ಗುರುಮಹಾಂತ ಅಪ್ಪಗಳು ಇಲಕಲ್ ಅವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ,ಸಂಸದ ಜಿ.ಕುಮಾರ ನಾಯಕ,ಶಾಸಕರಾದ ಚೆನ್ನಾರಡ್ಡಿ ಪಾಟೀಲ್,ಶರಣಗೌಡ ಕಂದಕೂರ,ರಾಜಾ ವೇಣುಗೋಪಾಲ ನಾಯಕ,ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಸೇರಿದಂತೆ ಜಿಲ್ಲಾಧಿಕಾರಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಆದ್ದರಿಂದ ಸುರಪುರ ಮತ್ತು ಹುಣಸಗಿ ತಾಲ್ಲೂಕಿನ ಎಲ್ಲಾ ಬಸವಾಭಿಮಾನಿಗಳು ಭಾಗವಹಿಸುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಸುರಪುರ ನಿಷ್ಠಿ ಕಡ್ಲೆಪ್ಪನವರ ಶ್ರೀ ಪ್ರಭುಲಿಂಗ ಮಹಾಸ್ವಾಮೀಜಿ, ಹೆಚ್.ಸಿ ಪಾಟೀಲ್,ಸೂಗುರೇಶ ವಾರದ,ಚಂದ್ರಶೇಖರ ದಂಡಿನ್,ವಕೀಲ ಎಮ್.ಎಸ್.ಹಿರೇಮಠ ಮಾತನಾಡಿದರು. ಗುಳಬಾಳದ ಮರಿಹುಚ್ಚೇಶ್ವರ ಮಹಾಸ್ವಾಮೀಜಿ,ಬಲಶೆಟ್ಟಿಹಾಳದ ಸಿದ್ದಲಿಂಗ ದೇವರು ಹಾಗೂ ದೇವಾಪುರದ ರವಿ ಮುತ್ಯಾ ಉಪಸ್ಥಿತರಿದ್ದರು. ಅಭಿಯಾನದ ಕುರಿತು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಗುಂಡಣ್ಣ ಕಲಬುರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರಕಾಶ ಅಂಗಡಿ ನಿರೂಪಿಸಿದರು,ಶಿವರಾಜ ಕಲಕೇರಿ ಸ್ವಾಗತಿಸಿದರು,ಜಗದೀಶ ಪಾಟೀಲ್ ವಂದಿಸಿದರು.ವೀರಶೈವ ಲಿಂಗಾಯತ ಸಮಾಜದ ನೂರಾರು ಜನರು ಭಾಗವಹಿಸಿದ್ದರು.
ಸಭೆಯಲ್ಲಿ ಮುಖಂಡರಾದ ಬಸವರಾಜ ಜಮದ್ರಖಾನಿ,ರವೀಂದ್ರ ಅಂಗಡಿ,ಸಿದ್ದಯ್ಯಸ್ವಾಮಿ ಕಡ್ಲೆಪ್ಪನವರ ಮಠ,ವಿರೇಶ ದೇಶಮುಖ,ಮಲ್ಲಣ್ಣ ಸಾಹುಕಾರ ನರಸಿಂಗಪೇಟ,ಮಲ್ಲಿಕಾರ್ಜುನ ಸತ್ಯಂಪೇಟೆ, ಶರಣಪ್ಪ ಕಲಕೇರಿ,ಶಿವಶರಣಪ್ಪ ಹೆಡಗಿನಾಳ,ಸೋಮಶೇಖರ ಶಾಬಾದಿ,ನಿಂಗಣ್ಣ ರಾಯಚೂರಕರ್,ವಿಶ್ವನಾಥರಡ್ಡಿ ಗೊಂದಡೆಗಿ,ಸಿದ್ದಣಗೌಡ ಪಾಟೀಲ್,ಅರುಣಕುಮಾರ ಗೋಲಗೇರಿ,ಅಮರೇಶ ಕುಂಬಾರ,ಶಿವರುದ್ರ ಉಳ್ಳಿ,ಮಲ್ಲು ಬಾದ್ಯಾಪುರ ಸೇರಿದಂತೆ ಅನೇಕರಿದ್ದರು.
- ಬಸವಾದಿ ಶರಣರ ವಿಚಾರವನ್ನು ನಾಡಿನೆಲ್ಲೆಡೆ ಜಾಗೃತಿ ಮೂಡಿಸಲು ಬರುತ್ತಿರುವ ಬಸವ ಸಂಸ್ಕೃತಿ ಅಭಿಯಾನವನ್ನು ಎಲ್ಲರು ಸ್ವಾಗತಿಸಿ ಕಾರ್ಯಕ್ರಮದಲ್ಲಿ ಇಡೀ ದಿನ ಭಾಗವಹಿಸುವ ಮೂಲಕ ಬಸವಾದಿ ಶರಣರ ಕುರಿತಾದ ಅಭಿಮಾನವನ್ನು ಹೆಚ್ಚಿಸಿಕೊಳ್ಳೋಣ- ಶಿವಕುಮಾರ ಸ್ವಾಮೀಜಿ ದುರದುಂಡೇಶ್ವರ ಮಠ ಕೊಡೇಕಲ್
- ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮಕ್ಕೆ ನಮ್ಮ ತಾಲ್ಲೂಕ ವೀರಶೈವ ಲಿಂಗಾಯತ ಸಮಿತಿ ಸಂಪೂರ್ಣವಾಗಿ ಭಾಗಿಯಾಗಲಿದ್ದು ಕಾರ್ಯಕ್ರಮಕ್ಕೆ ಹೋಗುವವರ ಮಾಹಿತಿಯನ್ನು ತಿಳಿಸಿದಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಿ,ಎರಡೂ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಬಂಧುಗಳು ಹಾಗೂ ಬಸವಾಭಿಮಾನಿಗಳು ಭಾಗವಹಿಸಲಿದ್ದೇವೆ- ಡಾ.ಸುರೇಶ ಸಜ್ಜನ್ ಅಧ್ಯಕ್ಷ ತಾಲ್ಲೂಕ ವೀರಶೈವ ಲಿಂಗಾಯತ ಸಮಿತಿ ಸುರಪುರ