ಹಿಂಗುಲಾಂಬಿಕದೇವಿ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮ : ರಂಗದಾಳ

ಕಲಬುರಗಿ: ನವರಾತ್ರಿ ಹಬ್ಬದ ನಿಮಿತ್ಯವಾಗಿ ಭಾವಸಾರ್ ಕ್ಷತ್ರಿಯ ಸಮಾಜ ವತಿಯಿಂದ ನಗರದ ಹಿಂಗುಲಾಂಬಿಕದೇವಿ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದು ಭಾವಸಾರ ಕ್ಷತ್ರಿಯ ಸಮಾಜದ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮೀಕಾಂತ್ ರಂಗದಾಳ ತಿಳಿಸಿದ್ದಾರೆ. ದಿನಾಂಕ ೨೫-೯-೨೦೨೫ ರಿಂದ ೩೦-೦೯-೨೦೨೫ ರವರೆಗೆ ಪ್ರತಿದಿನ ಬೆಳಿಗ್ಗೆ ೯ ಗಂಟೆಗೆ ಮತ್ತು ರಾತ್ರಿ ೮:೩೦ ಗಂಟೆಗೆ ದೇವಿ ಆರತಿ, ಅದೇರೀತಿಯಾಗಿ ಪ್ರತಿದಿನ ಸಾಯಂಕಾಲ ದಾಂಡಿಯಾ ನೃತ್ಯ ಸೇರಿದಂತೆ ವಿವಿಧ ದಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು, ಕಲಬುರಗಿ ಮಹಾ ಜನತೆ ಆಗಮಿಸಿ ದೇವಿಯ ಆಶೀರ್ವಾದ ಪಡೆದುಕೊಂಡು, ದಾಂಡಿಯಾದಲ್ಲಿ ಭಾಗವಹಿಸಬಹುದು ಎಂದು ರಂಗದಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!