ಕಲಬುರಗಿ: ನಗರದ ನಾಗನಹಳ್ಳಿ ಓವರ್ ಬ್ರಿಜ್ ಹತ್ತಿರದ ಅಶೋಕ ಲೇಔಟ್ನ ೨೭ನೇ ಕ್ರಾಸ್ನಲ್ಲಿರುವ ಅಯ್ಯಪ್ಪ ಸನ್ನಿಧಾನದಲ್ಲಿ ಗುರುಸ್ವಾಮಿ ಅಶೋಕ ಸಿ. ಹೊನ್ನಳ್ಳಿ ಅವರ ನೇತೃತ್ವದಲ್ಲಿ ಅಯ್ಯಪ್ಪಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ಚಿಣಮಗೇರಾ ಶ್ರೀ ಮಹಾಂತ ಶಿವಾಚಾರ್ಯರು ಅವರು ಅಯ್ಯಪ್ಪಸ್ವಾಮಿಗೆ ಆರುತಿ ಬೇಳಗಿ ಪೂಜೆ ಮಾಡಿದರು.
ಈ ಸಂದರ್ಭದಲ್ಲಿ ಗುರುಸ್ವಾಮಿ ಅಶೋಕ ಸಿ. ಹೊನ್ನಳ್ಳಿ ಅವರು ಮಾತನಾಡಿ ಸೆಪ್ಟೆಂಬರ್ ೩.ರಂದು ನಗರದ ನಾಗನಹಳ್ಳಿ ಓವರ್ ಬ್ರಿಜ್ ಹತ್ತಿರದ ಅಶೋಕ ಲೇಔಟ್ನ ೨೭ನೇ ಕ್ರಾಸ್ನಲ್ಲಿರುವ ಅಯ್ಯಪ್ಪ ಸನ್ನಿಧಾನದಲ್ಲಿ ಇರಮುಡಿ ಪೂಜೆ ಹಾಗೂ ವಿವಿಧ ಕಾರ್ಯಕ್ರಮಗಳು ಇರುತ್ತದೆ ಅಯ್ಯಪ್ಪನ ಆಶೀರ್ವಾದ ಪಡೆದುಕೊಂಡು ಪ್ರಸಾದ ಸ್ವಿಕರಿಸಲು ಅಪಾರ ಸಂಖೆಯಲ್ಲಿ ಭಕ್ತಾಧಿಗಳು ಆಗಮಿಸಬೇಕೆಂದು ತಿಳಿಸಿದರು.
ದಕ್ಷಿಣ ಮತಕ್ಷೇತ್ರ ಶಾಸಕ ಶಾಸಕ ಅಲ್ಲಮ ಪ್ರಭು ಪಾಟೀಲ್, ಶಿವಾನಂದ ಪಾಟೀಲ ಮರತೂರ, ನೀಲಕಂಠರಾವ ಮೂಲಗೆ, ಡಾ.ಕಿರಣ ದೇಶಮುಖ, ಶರಣು ಪಪ್ಪಾ, ಬಾಬು ಒಂಟಿ, ಶಿವಾನಂದ ಹೋನಗುಂಟಿ, ಶರಣು ಪಾಟೀಲ, ಶ್ರೀನಿವಾಸ ಲಾಖೆ, ಸಿದ್ದಾರ್ಥ ಕೋರವಾರ, ಗುರುಸ್ವಾಮಿಗಳಾದ ಮಲ್ಲಿಕಾರ್ಜುನ ಖಜೂರಿ, ಬನಶಂಕರಿ ಅಂಗಡಿ, ಗುರುದೇವ ಕಳಸ್ಕರ್, ರವಿರಾಜ ಕೊರವಿ, ಚಂದ್ರಶೇಖರ ಹಾವೇರಿ, ರಾಹುಲ್ ಹೊನ್ನಳ್ಳಿ, ರಾಜಕುಮಾರ ಹೊನ್ನಳ್ಳಿ, ಶರಣು ಮೂಲಗೆ, ನಾಗು ಪಾಟೀಲ್ ಸೇರಿದಂತೆ ಮಾಲಾಧಾರಿಗಳು ಉಪಸ್ಥಿತರಿದ್ದರು.
ಸೆ. ೩.ರಂದು ಅಯ್ಯಪ್ಪ ಸನ್ನಿಧಾನದಲ್ಲಿ ಅಶೋಕ ಸಿ. ಹೊನ್ನಳ್ಳಿ ನೇತೃತ್ವದಲ್ಲಿ ಇರಮುಡಿ ಪೂಜಾ


