48 ಗಂಟೆಯಲ್ಲಿ ವಾರಸುದಾರರಿಗೆ ಮರಳಿ ಸೇರಿದ 4 ಲಕ್ಷ ರೂ ಚಿನ್ನದ ಆಭರಣ

ಕಲಬುರಗಿ : 70 ವರ್ಷದ‌ ಹಿರಿಯವೃದ್ದರೊಬ್ಬರು ಚಿಕಿತ್ಸೆಗೆಂದು ಆಟೋ ಹತ್ತಿ ಜವಳಿ ಕಾಂಪ್ಲೇಕ್ಸ್ ಹತ್ತಿರ Haridas Heart Specialist ಆಸ್ಪತ್ರೆಗೆ ಬಂದಿರುತ್ತಾರೆ. ಚಿಕಿತ್ಸೆಯ X-ray ಯ ಸಲುವಾಗಿ ತಮ್ಮ ಮೈಮೇಲಿನ ಆಭರಣಗಳನ್ನು ತೆಗೆದು ಚೀಲದಲ್ಲಿ ಹಾಕಿ ಆಟೋದಲ್ಲಿ ಇಡುತ್ತಾರೆ. ಇದೇ ಸಂದರ್ಭದಲ್ಲಿ ರತ್ನಾಬಾಯಿ ರವರ ಮಗಳಾದ Dr. Sharadha ರವರು ತಮ್ಮ ತಂದೆಯನ್ನು ಮನೆಯಿಂದ ಕರೆದುಕೊಂಡು ಬರಲು ಅದೇ ಆಟೋದಲ್ಲಿ ವಿದ್ಯಾನಗರ ವಾಟರ್ ಟ್ಯಾಂಕ್ ಹತ್ತಿರ ಮರಳಿ ಮನೆಗೆ ತೆರಳುತ್ತಾರೆ. ಆಟೋದಲ್ಲಿಟ್ಟಿದ್ದ ಬ್ಯಾಗ್‌ನ್ನು ಮರೆತು ಮನೆಗೆ ತೆರಳುತ್ತಾರೆ. ಮರಳಿ ಆಸ್ಪತ್ರೆಗೆ ಬಂದು ಚಿಕಿತ್ಸೆಯ ನಂತರ ಶ್ರೀಮತಿ ರತ್ನಾಬಾಯಿ ರವರು ಆಭರಣಗಳಿದ್ದ ಬ್ಯಾಗ್ ಬಗ್ಗೆ ವಿಚಾರಿಸಿದಾಗ ಆಟೋದಲ್ಲಿ ಮರೆತಿರುವ ಬಗ್ಗೆ ಜ್ಞಾಪಿಸಿ ಸದರಿ ಮಾಹಿತಿಯನ್ನು ನಗರ ಪೊಲೀಸ್ ಆಯುಕ್ತರಾದ ಡಾ ಶರಣಪ್ಪ ಎಸ್.ಡಿ., ರವರಿಗೆ ತಿಳಿಸುತ್ತಾರೆ. ಕೂಡಲೇ ಪೊಲೀಸ್ ಆಯುಕ್ತರು , ಅಶೋಕ ನಗರ ಪೊಲೀಸ್ ಠಾಣೆಯ ಸಿಪಿಐ ಅರುಣಕುಮಾರ ಹಾಗೂ ಸಂಚಾರಿ ಪೊಲೀಸ್ ಠಾಣೆಯ ಸಿಪಿಐ ಮಾಹಾಂತೇಶ ಪಾಟೀಲ ರವರನ್ನೊಳಗೊಂಡ ತಂಡ ರಚಿಸಿ ಆಟೋ ಸಂಚರಿಸಿದ ಮಾರ್ಗವನ್ನು ಸಿ.ಸಿ.ಟಿ.ವಿ ಫೂಟೆಜ್ ಮೂಲಕ ಮಾಹಿತಿ ಕಲೆ ಹಾಕಿ ಆಟೋ ಚಾಲಕನನ್ನು ಪತ್ತೆ ಹಚ್ಚಿ ಸುಮಾರು 4,00,000/- ರೂ ಮೌಲ್ಯದ 40ಗ್ರಾಂ ಬಂಗಾರದ ಆಭರಣಗಳನ್ನು ವಾರಸುದಾರರಿಗೆ ಪೊಲೀಸ್ ಡಾ ಶರಣಪ್ಪ ಎಸ್.ಡಿ., ರವರು ಹಿಂದಿರುಗಿಸಿರುತ್ತಾರೆ

Leave a Reply

Your email address will not be published. Required fields are marked *

error: Content is protected !!