ಪ್ರತಿಯೊಬ್ಬರ ಜ್ಞಾನಾರ್ಜನೆಗೆ ಗ್ರಂಥಾಲಯದ ಪಾತ್ರ ಪ್ರಮುಖವಾದುದ್ದು : ಅಪರ ಮುಖ್ಯಕಾರ್ಯದರ್ಶಿ ಉಮಾ ಮಹಾದೇವನ್

ಕಲಬುರಗಿ: ಪ್ರತಿಯೊಬ್ಬರ ಜ್ಞಾನಾರ್ಜನೆಗೆ ಗ್ರಂಥಾಲಯ ಮತ್ತು ಗ್ರಂಥಪಾಲಕರು ತಮ್ಮ ಅಮೂಲ್ಯವಾದ ಸೇವೆ ಸಲ್ಲಿಸುತ್ತಿದ್ದು, ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ದೇಶದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳ ಕುರಿತು ಹೆಚ್ಚಿನ ಜ್ಞಾನ ಪಡೆದುಕೊಳ್ಳಲು ಗ್ರಂಥಾಲಯಗಳು ಸಹಕಾರಿಯಾಗಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಉಮಾ ಮಹಾದೇವನ್ ಹೇಳಿದರು.
ಮಂಗಳವಾರದAದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆ ಜಿಲ್ಲಾ ಪಂಚಾಯತ ಕಲಬುರಗಿ ಅವರ ಸಂಯುಕ್ತಾಶ್ರಯದಲ್ಲಿ ಗ್ರಂಥಪಾಲಕರ ದಿನಾಚರಣೆಯನ್ನು ಕಲಬುರಗಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಡಾ. ಎಸ್.ಆರ್ ರಂಗನಾಥನ್ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಪುಸ್ತಕ ಜೋಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಂಥಾಲಯದ ಪೀತಾಮಹ ಡಾ. ಎಸ್.ಆರ್. ರಂಗನಾಥನ್ ಅವರ ಜನ್ಮ ದಿನವನ್ನು ಗ್ರಂಥಪಾಲಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ೧೯೬೫ ಗ್ರಂಥಾಲಯ ಲೈಬ್ರರಿ ಕಾಯ್ದಿ ಜಾರಿಗೆ ಬಂದ ನಂತರ ಹಲವಾರು ಮಹತ್ವರವಾದ ಬದಲಾವಣೆ ಕಾಣಲು ಸಾಧ್ಯವಾಯಿತು. ನವೆೆಂಬರ್ ೨೦೨೦ ರಲ್ಲಿ ಓದುವ ಬೆಳಕು ಕಾರ್ಯಕ್ರಮ ಆರಂಭಿಸಲಾಯಿತು.
ಪುಸ್ತಕ ಜೋಳಿÀಗೆ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನಿಂದ ಸುಮಾರು ಎಂಟು ಸಾವಿರ ಪುಸ್ತಕಗಳನ್ನು ನೀಡುವುದರ ಮುಖಾಂತರ ಪುಸ್ತಕ ಜೋಳಿಗೆ ಕಾರ್ಯಕ್ರಮಕ್ಕೆ ಸಹಾಯ ಸಹಕಾರ ನೀಡಿರುವುದು ಬಹಳಷ್ಟು ಹೆಮ್ಮೆಯ ವಿಷಯ ಇದಕ್ಕೆ ಒದುಗರು ಮತ್ತು ಸ್ವಯಂ ಸೇವಾ ಸಂಸ್ಥೆಯವರು ಮತ್ತು ಸಂಘ ಸಂಸ್ಥೆಗಳ ನೀಡಿದ ಸಹಕಾರವೆ ಮುಖ್ಯಕಾರಣ ಎಂದು ಹೇಳಿದರು.
ಗ್ರಂಥಾಲಯ ಸ್ಥಾಪನೆಗೆ ಹೆಚ್ಚಿನ ಮಹತ್ವ ನೀಡಿದ ಡಾ. ಎಸ್.ಆರ್. ರಂಗನಾಥನ್ ಅವರ ಸಾಮಾಜಿಕ ಸೇವೆ ಮತ್ತು ಸಾಧನೆಗಳು ಪ್ರತಿಯೊಬ್ಬರಿಗೆ ಸ್ಫೂರ್ತಿಯಾಗಬೇಕೆಂದು ಹೇಳಿದರು.
ಸರ್ಕಾರದ ಅನುದಾನದಲ್ಲಿ ಗ್ರಂಥಾಲಯಗಳು ಮತ್ತು ಅರಿವು ಕೇಂದ್ರಗಳಿಗೆ ಪುಸ್ತಕ, ಫರ್ನಿಚರ್ ಮತ್ತು ಮೂಲ ಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು. ಸಾರ್ವಜನಿಕ ಪ್ರದೇಶಗಳಲ್ಲಿ ಪುಸ್ತಕ ಗೂಡು ಕಾರ್ಯಕ್ರಮದ ಮೂಲಕ ಪುಸ್ತಕಗಳನ್ನು ಒದಗಿಸಿ ಸಾರ್ವಜನಿಕರಿಗೆÀ ಓದಲು ಪ್ರತಿಕೂಲ ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.
ಸಾರ್ವಜನಿಕರು ಗ್ರಂಥಾಲಯಗಳಲ್ಲಿ ಓದಲು ಅವಕಾಶ ನೀಡಿದರೆ ದೇಶದಲ್ಲಿ ನಡೆಯುವ ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳಲು ಮತ್ತು ಜ್ಞಾನ ಹೆಚ್ಚಿಸಿಕೊಳ್ಳಲು ಗ್ರಂಥಾಲಯಗಳು ಮತ್ತು ಗ್ರಂಥಪಾಲಕರು ಆಧಾರ ಸ್ತಂಭಗಳAತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ನಲಿನ್ ಅತುಲ್ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಆಗಬೇಕಾದರೆ ಗ್ರಂಥಾಲಯಗಳ ಪಾತ್ರ ಬಹಳ ಮಹತ್ವದಾಗಿದೆ. ಸಾರ್ವಜನಿಕರ ಗ್ರಂಥಾಲಯಗಳಿಗೆ ಬಂದಾಗ ಅವರಿಗೆ ಬೇಕಾದ ಪುಸ್ತಕಗಳು ಮತ್ತು ದಿನಪತ್ರಿಕೆಗಳು ಓದುವುದರ ಮುಖಾಂತರ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಗ್ರಂಥಪಾಲಕರಿಗೆ ಅವರಿಗೆ ಬೇಕಾದ ವೃತ್ತಿ ಕೌಶಲ್ಯಕ್ಕೆ ತರಬೇತಿ ನೀಡಲಾಗಿದೆ. ಸುಮಾರು ೪೦೦೦ ಕ್ಕಿಂತ ಹೆಚ್ಚು ಹೊಸ ಡಿಜಿಟಲ್ ಲೈಬ್ರರಿಗಳನ್ನು ಮಾಡಿ ಅವುಗಳನ್ನು ಅರಿವು ಕೇಂದ್ರಗಳನ್ನಾಗಿ ಬದಲಾವಣೆ ಮಾಡಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭಂವರ ಸಿಂಗ್ ಮೀನಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥಮಾಡದೆ ಗ್ರಂಥಾಲಯದಲ್ಲಿ ದಿನ ಪತ್ರಿಕೆಗಳು ಮತ್ತು ಪುಸ್ತಕಗಳನ್ನು ಒದುವುದಕ್ಕೆ ಹೆಚ್ಚಿನ ಸಮಯ ನೀಡವುದರಿಂದ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.
ಸರ್ಕಾರದ ಆದೇಶದಂತೆ ಜಿಲ್ಲಾ ಪಂಚಾಯತ್ ತಾಲ್ಲೂಕ ಪಂಚಾಯತ್ ಮತ್ತು ಗ್ರಾಮ ಪಂಚಾಯತಿಗಳು ಶೇ. ೨೦ ರಷ್ಟು ಅನುದಾನ ಮೀಸಲಿಟ್ಟು ಕಾರ್ಯನಿರ್ವಹಿಸಿದಾಗ ಗ್ರಂಥಾಲಯ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದು ಹೇಳಿದರು.
ಸರ್ಕಾರದಿಂದ ಬಿಡುಗಡೆಯಾದ ೩ ಕೋಟಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸಾರ್ವಜನಿಕ ಗ್ರಂಥಾಲಯಗಳು ಅರಿವು ಕೇಂದ್ರವನ್ನು ಅಭಿವೃದ್ಧಿ ಮಾಡಲಾಗಿದೆ. ಡಾ. ಎಸ್.ಆರ್. ರಂಗನಾಥನ್ ಅವರು ಗ್ರಂಥಾಲಯಗಳ ಸ್ಥಾಪನೆಗೆ ಅವರು ನೀಡಿದ ಸಾಮಾಜಿಕ ಕೊಡುಗೆಗಳು ಪ್ರತಿಯೊಬ್ಬರಿಗೆ ಪೇರಣೆಯಾಗಬೇಕೆಂದು ಹೇಳಿದರು.
ಗ್ರಂಥಪಾಲಕರಿಗೆ ವೃತ್ತಿ ಕೌಶಲ್ಯಕ್ಕೆ ಬೇಕಾದ ತರಬೇತಿಯನ್ನು ನೀಡಲಾಗಿದ್ದು, ಗ್ರಂಥಾಲಯಗಳು ಮತ್ತು ಗ್ರಂಥಪಾಲಕರು ಓದುಗರಿಗೆ ಪೂರಕವಾದ ವಾತಾವರಣ ನಿರ್ಮಿಸಿ ಗ್ರಂಥಾಲಯಗಳು ಸ್ವಚ್ಪತೆ ಮತ್ತು ನೈರ್ಮಲ್ಯ ಕಾಪಾಡಿ ಓದುಗರಿಗೆ ಪೂರಕವಾದ ವಾತಾವರಣ ನಿರ್ಮಸಿ ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಗ್ರಂಥಪಾಲಕರು ದಿನಾಚರಣೆಯ ಕಾರ್ಯಕ್ರಮದ ಕುರಿತು ವಿಶೇಷ ಉಪನ್ಯಾಸ ದಾನಪ್ಪ ವಗ್ಗೆ, ಜಿ.ಪಂ.ಉಪಕಾರ್ಯದರ್ಶಿಗಳ ಲಕ್ಷö್ಮಣ ಶೃಂಗೇರಿ ಅವರು ಕೂಸಿನ ಮನೆ ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಿದರು.
ಅರಿವು ಕೇಂದ್ರ ಮೇಲ್ವೀಚಾರಕ ಸಿದ್ರಾಮ ಮಹಾದೇವಪ್ಪ ಅವರಿಗೆ ಪ್ರಥಮಸ್ಥಾನ, ಹರ್ಷವರ್ಧನ ರೆಡ್ಡಿ ಅವರಿಗೆ ಉತ್ತಮ ಪ್ರಶಸ್ತಿ, ಅತಿ ಹೆಚ್ಚು ಇ-ಹಾಜರಾತಿಗೆ ಭೀಮಾರಾವ ಗೋವಿಂದಪ್ಪ ಪ್ರಶಸ್ತಿ ನೀಡಲಾಯಿತು. ಅದೇ ರೀತಿಯಾಗಿ ಜಿಲ್ಲೆಯ ಅರಿವು ಕೇಂದ್ರಗಳಿAದ ಆಯ್ಕೆಯಾದ ಹಾಗೂ ಅರಿವು ಕೇಂದ್ರಗಳಲ್ಲಿ ಮೇಲ್ವಿಚಾರಕರಿಗೆ ಪ್ರಶಸ್ತಿ ಪ್ರಧಾನ ಮತ್ತು ಅರಿವು ಕೇಂದ್ರಗಳಲ್ಲಿ ಪ್ರಗತಿಗೆ ಶ್ರಮಿಸಿದ ಸರ್ಕಾರೇತರ್ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಅವಿನಾಶ ಶಿಂಧೆ, ಸಹಾಯಕ ಆಯುಕ್ತೆ ಕುಮಾರಿ ಸಾಹಿತ್ಯ.ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎಸ್.ಎಸ್.ಮಠಪತಿ ಯೋಜನಾ ನಿರ್ದೇಶಕ ಜಗದೇವಪ್ಪ, ಸೇರಿದಂತೆ, ಜಿಲ್ಲಾ ಪಂಚಾಯತ್ ಇ.ಓ. ಗಳು ಪಿ.ಡಿ.ಓ.ಗಳು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಸಂಘ ಸಂಸ್ಥೆಗಳು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಆಳಂದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!