ಶಿವಯೋಗಿ ರುಸ್ತಂಪೂರ,ರಾಜ ಮಟ್ಟದ ಕರುನಾಡ ರತ್ನ ಪ್ರಶಸ್ತಿ

ಚಿಂಚೋಳಿ ತಾಲೂಕಿನ ಚಿಮ್ಮಇದಲಾಯಿ ಗ್ರಾಮದ ಶಿವಯೋಗಿ ರುಸ್ತಂಪೂರ, ಅವರಿಗೆ ಸಮಾಜ ಸೇವಕ ಎಂದು ಗುರುತಿಸಿ ಬೆಂಗಳೂರಿನ ಕರ್ನಾಟಕ ಸಂಸ್ಕೃತಿಕ ಅಕಾಡೆಮಿ ವತಿಯಿಂದ ರಾಜ್ಯಮಟ್ಟದ ಶ್ರೇಷ್ಠ ನಾಗರಿಕ ಸೇವಾ ಪ್ರಶಸ್ತಿ ಕರುನಾಡು ರತ್ನ ಪ್ರಶಸ್ತಿ ನವಂಬರ್ 13ನೇ ತಾರೀಖರಂದು ಬೆಂಗಳೂರಿನ ಕಲಾಗ್ರಾಮ ಎನ್.ಜಿ.ಇ. ಎಫ್. ಲೇಔಟ್ ಜ್ಞಾನಭಾರತಿ, ಫಂಕ್ಷನ್ ಹಾಲ ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಡಿವಿ ಸದಾನಂದ ಗೌಡ, ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗ ಕಲ್ಯಾಣ ಸಚಿವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಿಗಿ, ವಿಧಾನ ಪರಿಷತ್ ಸದಸ್ಯರಾದ ಟಿ.ಎನ್ ಜವರಾಯಿಗೌಡ, ನಿವತ್ತಿ ಐ ಪಿ ಎಸ್ ಅಧಿಕಾರಿಗಳಾದ ಶಂಕರ್ ಬಿದರಿ, ಮತ್ತು ಅನೇಕ ಗಣ್ಯರು ಕನ್ನಡ ಸಂಸ್ಕೃತಿ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಕರುನಾಡ ರತ್ನ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ
ಎಂದು ಕರ್ನಾಟಕ ಸಂಸ್ಕೃತಿ ಅಕಾಡೆಮಿಯ ಅಧ್ಯಕ್ಷರಾದ ರಮೇಶ್ ಎಸ್. ಜಿ.ಅವರು ಪತ್ರಿಕಾ ಪ್ರಕಟದ ಮೂಲಕ ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!