ವಡಗೇರಾ ಡಿಡಿಯು ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ

ವಡಗೇರಾ:ಹೈದರಾಬಾದ್ ಕರ್ನಾಟಕ ವಿಮೋಚನೆಯಾಗಲು ಸರ್ದಾರ್ ವಲ್ಲಭಾಯಿ ಪಟೇಲ್ ಸೇರಿದಂತೆ ಈ ಭಾಗದ ಅನೇಕ ಹಿರಿಯ ಹೋರಾಟಗಾರರ ಫಲವಾಗಿ ನಮಗೆ ಇಂದು ಸ್ವಾತಂತ್ರ್ಯ ಸಿಕ್ಕಿದೆ ಎಂದು ಡಿಡಿಯು ಸಿಬಿಎಸ್ಇ ಶಾಲೆಯ ಪ್ರಾಂಶುಪಾಲ ಸಜೀಶ್ ರಾಜ್ ಹೇಳಿದರು. ಪಟ್ಟಣದ ಡಿಡಿಯು ಸಿಬಿಎಸ್ಇ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ನಮ್ಮ ಭಾಗದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾದದ್ದು ,ದೇಶದ ಅಭಿವೃದ್ಧಿಯಲ್ಲಿ…

Read More

ಸುರಪುರ : ಕಲ್ಯಾಣ ಕನಾಟಕ ಉತ್ಸವ ಕಾರ್ಯಕ್ರಮ

ಸುರಪುರ: ನಗರದ ಸರ್ದಾರ್ ವಲ್ಲಭಬಾಯ್ ಪಟೇಲ್ ವೃತ್ತದಲ್ಲಿ ತಾಲೂಕ ಆಡಳಿತ ದಿಂದ ಕಲ್ಯಾಣ ಕನಾಟಕ ಉತ್ಸವ ಕಾರ್ಯಕ್ರಮ ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿದರು. ದೇಶಕ್ಕೆ ೧೯೪೭ ಆಗಸ್ಟ್ ೧೫ರಂದು ಸ್ವಾತಂತ್ರ‍್ಯ ದೊರಕಿತಾದರೂ ಹೈದರಾಬಾದ್ ಪ್ರಾಂತ್ಯ ವಿಲೀನಕ್ಕೆ ಒಪ್ಪದಿದ್ದಾಗ ನಿಜಾಮರ ವಿರುದ್ಧ ಆಪರೇಷನ್ ಪೊಲೋ ಮಾಡಿ ನಿಜಾಮರ ಸೈನ್ಯವನ್ನು ಹತ್ತಿಕ್ಕುವಲ್ಲಿ ಅನೇಕ ಮಹನಿಯರು ಹೋರಾಟ ತ್ಯಾಗ, ಬಲಿದಾನಗೈದು ನಮ್ಮ ಭಾಗವನ್ನು ಸ್ವಾತಂತ್ರö್ಯಗೊಳಿಸಿದರು ಎಂದರು. ಕಲ್ಯಾಣ ಕರ್ನಾಟಕ ವಿಮೋಚನೆಗಾಗಿ ಹೋರಾಟ ಮಾಡಿದ ಎಲ್ಲ ಮಹನಿಯರು ಸ್ಮರಿಸುವುದು…

Read More

ಚನ್ನಪ್ಪ ಹೊಗರಿ ಹಿರೇಹಳ್ಳ ಮಾಸ್ತರ್ | ನಿಧನ 

ಸುರಪುರ: ತಾಲೂಕಿನ ಕಕ್ಕೇರಾ ಪಟ್ಟಣದ ಚನ್ನಪ್ಪ ಹೊಗರಿ (ಹಿರೇಹಳ್ಳ ಮಾಸ್ತರ್) ಅವರು ವಯೋ ಸಹಜ ಕಾಯಿಲೆಯಿಂದ ಮಂಗಳವಾರ ನಿಧನ ಹೊಂದಿದ್ದು, ಸಾಯಂಕಾಲ ೬ ಗಂಟೆಗೆ ಪಟ್ಟಣದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಿತು.ಅಪಾರ ಬಂಧುಗಳು ಹಾಗೂ ಶಿಷ್ಯ ಬಳಗ ಬಿಟ್ಟು ಅಗಲಿದ್ದಾರೆ.ಚನ್ನಪ್ಪ ಮಾಸ್ತರ್ ಅವರ ನಿಧನಕ್ಕೆ ಶಿಷ್ಯ ವೃಂದ ಸೇರಿದಂತೆ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.

Read More

ಕ್ರೀಡೆಗಳಿಂದ ಮಾನಸಿಕ ದೈಹಿಕ ಆರೋಗ್ಯ ವೃದ್ಧಿ: ತಿಪ್ಪಣ್ಣ ಶಿರಸಗಿ

ಯಾದಗಿರಿ: ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತಿಪ್ಪಣ್ಣ ಶಿರಸಗಿ ಹೇಳಿದರು. ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಕ್ರೀಡಾ ಇಲಾಖೆ,ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಸಂಯುಕ್ತಾಶ್ರಯದಲ್ಲಿ  ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರಿಗಾಗಿ ವಿವಿಧ ಕ್ರೀಡೆಗಳು ಸಾಂಸ್ಕೃತಿಕ ಸಂಗೀತ ಜಾನಪದ ಕಾರ್ಯಕ್ರಮಕ್ಕೆ ಚಾಲನೆ ನೀಡಿ…

Read More

ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಭದ್ರ ಬುನಾದಿ ಹಾಕಬೇಕು-ಶಾಸಕ ಆರ್.ವಿ.ನಾಯಕ

ಸುರಪುರ: ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ೧೩೮ನೇ ಜನ್ಮದಿನ ಅಂಗವಾಗಿ ಜಿಲ್ಲಾ ಪಂಚಾಯತಿ ಯಾದಗಿರಿ,ತಾಲೂಕ ಪಂಚಾಯತಿ ಸುರಪುರ/ಹುಣಸಗಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸುರಪುರ ಮತ್ತು ವಿವಿಧ ಶಿಕ್ಷಕರ ಸಂಘಗಳ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ರಾಜ್ಯ ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಆಚರಿಸಲಾಯಿತು.

Read More

ಚಿಂಚೋಳಿ ಸರಕಾರಿ ನೌಕರರ ಸಂಘದ ಸದಸ್ಯರಾಗಿ ಗಂಗಾಧರ ಹೊಸಳ್ಳಿ ಆಯ್ಕೆ

ಚಿಂಚೋಳಿ ತಾಲೂಕಿನ ರಾಜ್ಯ ಕರ್ನಾಟಕ ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಚಿಂಚೋಳಿಯ ಸಂಘದ ಸದಸ್ಯರಾಗಿ ತಾಲೂಕಿನ ಸುಲೇಪೇಟ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ್ ದ್ವಿ.ದಾ.ಸ ಗಂಗಾಧರ ಹೊಸಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸರಕಾರಿ ನೌಕರರ ಸಂಘದ ಅಧ್ಯಕ್ಷ ದೇವೀಂದ್ರಪ್ಪ ಹೋಳ್ಕರ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅಧ್ಯಕ್ಷ ದೇವೀಂದ್ರಪ್ಪ ಹೋಳ್ಕರ್, ಡಾ. ಮಲ್ಲಿಕಾರ್ಜುನ ಪಾಲಮೂರ, ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಕೊರವಿ, ಎಸ್.ಬಿ. ಗಂಗನಕರ್ , ಅಣ್ಣಾರಾಯ ವಡಳ್ಳಿ, ಸಿದ್ದಲಿಂಗಯ್ಯ, ರಾಘವೇಂದ್ರ, ಕುಪೇಂದ್ರ, ಪ್ರದೀಪಕುಮಾರ,…

Read More

ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ, ಶಾಂತಿ: ಹಾರಕೂಡ ಶ್ರೀ

ಯಲಕಪಳ್ಳಿಯಲ್ಲಿ ರಾಮಲಿಂಗೇಶ್ವರ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ ಕಾರ್ಯಕ್ರಮ ಕಲಬುರಗಿ:ಒತ್ತಡದ ಜೀವನದಿಂದ ಮನುಷ್ಯ ಮನಸ್ಸಿನ ನೆಮ್ಮದಿ ಕಳೆದುಕೊಳ್ಳುತ್ತಿದ್ದು, ಮನಸ್ಸಿನ ನೆಮ್ಮದಿಗಾಗಿ ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯದಲ್ಲಿ ತೊಡಗಬೇಕು‌.ಮಠ – ಮಂದಿರಗಳು ಧಾರ್ಮಿಕ ಭಾವನೆಗಳ ಬಗ್ಗೆ ಅರಿವು ಮೂಡಿಸುತ್ತಿದ್ದು, ಜನರಿಗೆ ನೆಮ್ಮದಿ ತರುವ ನೆಮ್ಮದಿ ತಾಣವಾಗಿವೆ ಎಂದು ಸುಕ್ಷೇತ್ರ ಹಾರಕೂಡದ‌ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ತಿಳಿಸಿದರು. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಯಲಕಪಳ್ಳಿ ಗ್ರಾಮದಲ್ಲಿ‌ ಗುರುವಾರ ಹಮ್ಮಿಕೊಂಡ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮ…

Read More

ಮಳೆ ನೀರು ರೈತರ ಹೊಲಗಳಿಗೆ ನುಗ್ಗಿವೆ ಕಂಗಾಲಾದ  ಅನ್ನದಾತ

ಕಲಬುರಗಿ: ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕಿನ ಕುರನೂರ ಡ್ಯಾಮನಿಂದ ಗುರುವಾರ ರಾತ್ರಿ  ನೀರು ಹರಿಬಿಟ್ಟಿದ್ದರಿಂದ ಅಫಜಲಪುರ ತಾಲೂಕಿನ ಜೇವರಗಿ ತೆಲ್ಲೂಣಗಿ ಹಿರೆ ಜೇವರಗಿ ನಂದರಗಿ ಗೌರ ಬಂಕಲಗಿ ದಿಕ್ಸಂಗಾ ಈ ಎಲ್ಲಾ ಗ್ರಾಮಗಳ ರೈತರ ಜಮೀನಿಗೆ ನೀರು ನುಗ್ಗಿದ್ದು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸುಮಾರು ನೂರಾರು ಎಕರೆ ಮೇಲಪಟ್ಟು ಬೆಳೆದ ಬೆಳೆ ಹಾನಿಯಾಗಿದೆ. ಸಾಲ ಸೋಲ ಮಾಡಿ ಬಿತ್ತಿದ ರೈತರ ಹೊಲ ಗದ್ದೆಯಲ್ಲಿದ್ದ ರೈತರ ವಾಣಿಜ್ಯ ಬೆಳೆಗಳಾದ ಹತ್ತಿ ತೊಗರಿ ಉದ್ದು ಕಬ್ಬು ಸೋಯಾಬಿನ…

Read More

ಅಫಜಲಪುರ : ಮಳೆದಿಂದ ಹಾನಿಯಾದ ಮನೆಗಳಿಗೆ ಜಿಪಂ ಸಿಇಒ ಭೇಟಿ

ಕಲಬುರಗಿ: ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕಿನ ಕುರನೂರ ಡ್ಯಾಮನಿಂದ ಗುರುವಾರ ರಾತ್ರಿ ನೀರು ಹರಿಬಿಟ್ಟಿದ್ದರಿಂದ ಅಫಜಲಪುರ ತಾಲೂಕಿನ ನಂದರಗಿ ತೆಲ್ಲೂಣಗಿ ಜೇವರ್ಗಿ ಬಿ ಜೇವರ್ಗಿ ಕೆ ಗೌರ ಬಂಕಲಗಾ ದಿಕ್ಸಂಗಾ ಈ ಎಲ್ಲಾ ಗ್ರಾಮಗಳು ಪ್ರವಾಹದ ಆತಂಕದಲ್ಲಿದ್ದು ನಂದರಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜೇವರ್ಗಿ ಬಿ, ಗ್ರಾಮಕ್ಕೆ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವಂರ ಸಿಂಗ್ ಮೀನಾ ಅವರು ಭೇಟಿ ನೀಡಿದರು. ಬೋರಿ ಹಳ್ಳ ನೀರಿಂದ ಹಾನಿಯಾದ ಮನೆಗಳಿಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ  ಧೈಯ೯ ತುಂಬಿದರು….

Read More

ಅಫಜಲಪುರದ ಜಾಹಗಿರದಾರ ಕಾಪ್ಲೇಕ್ಸನಲ್ಲಿ ಎನ್ ಎಸ್ ಎಲ್ ಶುಗರ್ಸ್ ಲಿ ಭುಸನೂರ ಕಾರ್ಖಾನೆಯಿಂದ ಸಕ್ಕರೆ ವಿತರಣೆ

ಕಲಬುರಗಿ: ರೈತರು ತಾವು ಪೂರೈಸಿದ ಪ್ರತಿ ಟನ್‌ ಕಬ್ಬಿಗೆ 250 ಗ್ರಾಂ (ಪ್ರತಿ ಕೆ.ಜಿಗೆ ₹20 ದರದಲ್ಲಿ) ಸಕ್ಕರೆಯನ್ನು ಸೇ 10ರಿಂದ 20 ರವರೆಗೆ ಎನ್ ಎಸ್ ಎಲ್ ಶುಗರ್ಸ್ ಲಿ ಭುಸನೂರ ಕಾರ್ಖಾನೆಯಿಂದ ಅಫಜಲಪುರ ಪಟ್ಟಣದ ಜಾಹಗಿರದಾರ ಕಾಪ್ಲೇಕ್ಸದಲ್ಲಿ ವಿತರಿಸಲಾಗುವುದು. ಸೂಕ್ತ ದಾಖಲೆ ತಮ್ಮ ಆಧಾರ ಕಾರ್ಡ ತೋರಿಸಿ, ರೈತರು ಖುದ್ದಾಗಿ ಅಥವಾ ತಮ್ಮ ಪ್ರತಿನಿಧಿ ಮೂಲಕ ಸಕ್ಕರೆ ಪಡೆಯಬಹುದು ಎಂದು ಕಾರ್ಖಾನೆಯ ಉಪಾಧ್ಯಕ್ಷ ಬಾಸ್ಕರ ನಾಯ್ಡು ತಿಳಿಸಿದ್ದಾರೆ. ರೈತರಿಗೆ ಅನುಕೂಲವಾಗುವಂತೆ ಅಫಜಲ್ಪುರ ಪಟ್ಟಣ ಹಾಗೂ…

Read More
error: Content is protected !!