ವಿದ್ಯುತ್ ಶಾಕ್ಗೆ ಮೃತಪಟ್ಟ ರೈತ ಕುಟುಂಬಕ್ಕೆ ಶಾಸಕ ಆರ್.ವಿ.ಎನ್ ಪರಿಹಾರದ ಚೆಕ್ ವಿತರಣೆ
ಸುರಪುರ: ಹೊಲದಲ್ಲಿ ಕೆಲಸ ಮಾಡುವಾಗ ವಿದ್ಯುತ್ ತಂತಿ ತಗುಲಿ ಶಾಕ್ ನಿಂದ ಸಾವನಪ್ಪಿದ್ದ ರಂಗಂಪೇಟೆಯ ರೈತ ಸೋಮನಾಥ ಕುಟುಂಬಕ್ಕೆ ಸರಕಾರದ 5 ಲಕ್ಷ ರೂಪಾಯಿಗಳ ಪರಿಹಾರ ಧನದ ಚೆಕ್ ಶಾಸಕ ರಾಜಾ ವೇಣುಗೋಪಾಲ ನಾಯಕ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ವಿಠಲ್ ಯಾದವ್, ಮಲ್ಲಣ್ಣ ಸಾಹುಕಾರ ಮುಧೋಳ ,ದೊಡ್ಡ ದೇಸಾಯಿ , , ರಮೇಶ್ ಯಾದವ್, ವಾಸುದೇವ ಮಂಗಳೂರು,ನಾಗಪ್ಪ ದೇವರಗೋನಾಲ ಸೇರಿದಂತೆ ಮೃತ ರೈತನ ಕುಟುಂಬದವರಿದ್ದರು.


