ಸಂಸ್ಕಾರವಿಲ್ಲದಿದ್ದರೆ ಎಷ್ಟೇ ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆದರು ವ್ಯರ್ಥ | ಅವಂಟಿ

ಚಿತ್ತಾಪುರ : ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳಿಗೆ ಸಂಸ್ಕಾರ ಬೋಧನೆ ಅತ್ಯಶ್ಯಕವಾಗಿದೆ. ಸಂಸ್ಕಾರವಿಲ್ಲದಿದ್ದರೆ ಎಷ್ಟೇ ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆದರು ವ್ಯರ್ಥ.ಎಂದು ಮುರಾರ್ಜಿ ದೇಸಾಯಿ ರೆಸಿಡೆನ್ಸಿ ಶಾಲೆಯ ಪ್ರಿನ್ಸಿಪಲ್ ಬಸವರಾಜ ಅವಂಟಿ ಅವರು ಹೇಳಿದರು ಆದರ್ಶ ಸರ್ಕಾರಿ ಪದವಿ ಪೂರ್ವ ಕಾಲೇಜುಯಲ್ಲಿ ಇಂದು ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರ ಹಾಗೂ ಕಾಲೇಜಿನ ಸಾಧನೆ ಆಗಿರುತ್ತದೆ ಹಾಗಾಗಿ ತಾವೆಲ್ಲ ಆಸಕ್ತಿಯಿಂದ ಓದಿನ ಕಡೆಗೆ ಗಮನ ಹರಿಸಬೇಕು…

Read More

ಸಯ್ಯದ್ ನಿಜಾಮುದ್ದೀನ್ ಚಿಸ್ತಿ ಅವರಿಗೆ AMP ರಾಷ್ಟ್ರೀಯ ಸಾಮಾಜಿಕ ಶ್ರೇಷ್ಠತೆ ಪ್ರಶಸ್ತಿ

ಕಲಬುರಗಿ: ಕಲಬುರಗಿ ಹಾಗೂ ಕರ್ನಾಟಕದ ಹೆಮ್ಮೆಯ ಕ್ಷಣ, ಪ್ರಸಿದ್ಧ ಸಮಾಜಸೇವಕ ಹಾಗೂ ಶಿಕ್ಷಣ ಹೋರಾಟಗಾರ ಸಯ್ಯದ್ ನಿಜಾಮುದ್ದೀನ್ ಚಿಸ್ತಿ ಅವರಿಗೆ AMP ರಾಷ್ಟ್ರೀಯ ಸಾಮಾಜಿಕ ಶ್ರೇಷ್ಠತೆ ಪ್ರಶಸ್ತಿ – 2025ರಲ್ಲಿ ವರ್ಷದ ಚೇಂಜ್ ಮೇಕರ್ ವಿಭಾಗದಲ್ಲಿ ಗೌರವಿಸಲಾಗಿದೆ. ಈ ಪ್ರಶಸ್ತಿಯನ್ನು ಅಸೋಸಿಯೇಷನ್ ಆಫ್ ಮುಸ್ಲಿಂ ಪ್ರೊಫೆಶನಲ್ಸ್ (AMP) ಆಯೋಜಿಸಿದ 5ನೇ ರಾಷ್ಟ್ರೀಯ ಸಾಮಾಜಿಕ ಶ್ರೇಷ್ಠತೆ ಪ್ರಶಸ್ತಿ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಸಮಾಜ, ಶಿಕ್ಷಣ ಮತ್ತು ಕಲ್ಯಾಣ ಕ್ಷೇತ್ರಗಳಲ್ಲಿ ಅವರು ನೀಡಿದ ಮಹತ್ವದ ಕೊಡುಗೆಯನ್ನು ಪರಿಗಣಿಸಿ ಈ ಗೌರವ…

Read More

ಸುರಪುರ:ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಸುರಪುರ: ಪಟ್ಟಣದ ಜಿಲ್ಲಾ ಪಂಚಾಯತಿ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ,ತಾಲೂಕ ದೈಹಿಕ ಶಿಕ್ಷಕರ ಸಂಘ ಇವರುಗಳು ಸಂಯುಕ್ತಾಶ್ರಯದಲ್ಲಿ ನಗರದ ತಾಲೂಕ ಕ್ರೀಡಾಂಗಣದಲ್ಲಿ ೧೪/೧೭ ವಯೋಮಿತಿಯ ಬಾಲಕ ಬಾಲಕಿಯರ ತಾಲೂಕ ಮಟ್ಟದ ಕ್ರೀಡಾಕೂಟ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಇಓ ಯಲ್ಲಪ್ಪ ಕಾಡ್ಲೂರ ಮಾತನಾಡಿ, ಯಾವುದೇ ಕ್ರೀಡೆಯಲ್ಲಿ ಸೋಲು ಗೆಲುವು ಎನ್ನುವುದು ಸಾಮಾನ್ಯ,ಆದರೆ ಕ್ರೀಡಾಪಟುಗಳು ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ತಿಳಿಸಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ ಕ್ರೀಡಾ…

Read More

ದೇವರಗೋನಾಲ:ಗ್ಯಾರಂಟಿ ಯೋಜನೆಗಳ ನಡೆ ಗ್ರಾಮ ಪಂಚಾಯತಿ ಕಡೆ ಕಾರ್ಯಕ್ರಮ

ಸುರಪುರ: ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ನಡೆ ಗ್ರಾಮ ಪಂಚಾಯತಿ ಕಡೆಗೆ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ,ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳು ಸಾರ್ವಜನಿಕರ ಅನುಕೂಲಕ್ಕಾಗಿ ಜಾರಿಗೊಳಿಸಿದ್ದು,ಎಲ್ಲ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕು ಹಾಗೂ ಅನ್ನ ಭಾಗ್ಯ,ಶಕ್ತಿ ಯೋಜನೆ,ಯುವನಿಧಿ,ಗೃಹ ಲಕ್ಷ್ಮೀ,ಗೃಹ ಜ್ಯೋತಿ ಯೋಜನೆಗಳು ನಾಡಿನ ಪ್ರತಿ ಮನೆಗೆ ತಲುಪಿಸಿದ ಕೀರ್ತಿ ಮುಖ್ಯಮಂತ್ರಿಗಳಿಗೆ ಹಾಗೂ ಸರಕಾರಕ್ಕೆ ಸಲ್ಲುತ್ತದೆ,ಗ್ಯಾರಂಟಿ ಯೋಜನೆ ಪ್ರತಿ ಫಲಾನುಭವಿಗೆ ತಲುಪಿಸುವ ಜವಬ್ದಾರಿ ಅಧಿಕಾರಿಗಳ ಮೇಲಿದೆ.ಅಧಿಕಾರಿಗಳು ಲೋಪ ಎಸಗಿದಲ್ಲಿ…

Read More

*ವೈದ್ಯಕೀಯ ಆರೈಕೆಯಲ್ಲಿ ಮಾನವೀಯ ಸ್ಪರ್ಶ ಉತ್ತಮ ಫಲಿತಾಂಶ ನೀಡುತ್ತದೆ* ಡಾ ಪೀಟರ್ ಆಂಡ್ರೂ ಬ್ರೇನನ್

ಕಲಬುರ್ಗಿ: ವೈದ್ಯಕೀಯ ಆರೈಕೆಯಲ್ಲಿ ಮಾನವೀಯತೆಯ ಸ್ಪರ್ಶವು ರೋಗಿಯ ಸ್ವಾತಂತ್ರ್ಯವನ್ನು ಗೌರವಿಸಿ, ನಂಬಿಕೆ ಮತ್ತು ಸಹಾನುಭೂತಿಯ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ, ಇದು ಉತ್ತಮ ವೈದ್ಯಕೀಯ ಫಲಿತಾಂಶಗಳಿಗೆ ಕಾರಣವಾಗುತ್ತದೆ ಎಂದು ಇಂಗ್ಲೆಂಡ್ ನ ಪ್ರಖ್ಯಾತ ವೈದ್ಯ ಡಾ ಪೀಟರ್ ಆಂಡ್ರೂ ಬ್ರೇನನ್ ಹೇಳಿದರು. ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್ ನಿಜಲಿಂಗಪ್ಪ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ ಮಾನವೀಯತೆ ಹಾಗೂ ರೋಗಿಯ ಆರೈಕೆ ಎಂಬ ವಿಷಯದ ಕುರಿತಾದ ಆತಿಥ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ…

Read More

ಸೆ.20 ರಂದು ಕಲ್ಯಾಣ ಕರ್ನಾಟಕ ಪತ್ರಕರ್ತರ ಪ್ರಥಮ ಸಮ್ಮೇಳನ

ಕಲಬುರಗಿ : ಪ್ರಜಾಸುದ್ದಿ ಕನ್ನಡ‌ ದಿನಪತ್ರಿಕೆಯ 15 ನೇ ವಾರ್ಷಿಕೋತ್ಸವದ ಅಂಗವಾಗಿ ಕಲ್ಯಾಣ ಕರ್ನಾಟಕ ಪತ್ರಕರ್ತರ ಪ್ರಥಮ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಜಾಸುದ್ದಿ ಕನ್ನಡದಿನ ಪತ್ರಿಕೆಯ ಸಂಪಾದಕ ಶರಣಪ್ಪಬಸಪ್ಪ ಸುಗೂರು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದೇ ಸೆ. 20 ರಂದು ನಗರದ ಜಿಲ್ಲಾ ಪಂಚಾಯತ ಅವರಣದಲ್ಲಿರುವ ಪತ್ರಿಕಾ ಭವನದಲ್ಲಿ ಸಮ್ಮೇಳನವನ್ನು ಆಯೋಜಿಸಿದ್ದು, ಸಮ್ಮೇಳನಾಧಕ್ಷರಾಗಿ ಹಿರಿಯ ಪತ್ರಕರ್ತ, ಹಾಗೂ ಸಾಹಿತಿ ಡಾ. ಶಿವರಂಜನ್ ಸತ್ಯಂಪೇಟ, ಹಾಗೂ ಶಾಸಕ ಬಸವರಾಜ…

Read More

ಮಹಾನಗರ ಪಾಲಿಕೆ ಮಹಾಪೌರರಾದ ವರ್ಷಾ ರಾಜೀವ ಜಾನೆ ಅವರನ್ನು ಶ್ರೀ ಅಂಬಿಗರ ಸೇವಾದಳ ವತಿಯಿಂದ ಸನ್ಮಾನ

ಕಲಬುರಗಿ: ಮಹಾನಗರ ಪಾಲಿಕೆ ಪೂಜ್ಯ ಮಹಾಪೌರರಾದ ವರ್ಷಾ ರಾಜೀವ ಜಾನೆ ಅವರನ್ನು ಶ್ರೀ ಅಂಬಿಗರ ಸೇವಾದಳ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂದೇಶ ಕಮಕನೂರ, ದಿಗಂಬರ ನಾಡಗೌಡ, ಶ್ರೀ ಅಂಬಿಗರ ಸೇವಾದಳದ ರಾಜ್ಯಾಧ್ಯಕ್ಷ ಸಂತೋಷ ಬೆಣ್ಣೂರ, ಜಿಲಾಧ್ಯಕ್ಷ ಆನಂದ ಕದರ್ಗಿ, ನಗರ ಅಧ್ಯಕ್ಷ ರಾಜು ಸೊನ್ನ, ಉಪಾಧ್ಯಕ್ಷರಾದ ಶರಣು ಕಿರಸಾವಳಗಿ, ಮಾಂತೇಶ ಹರವಾಳ, ಸದ್ಯಸರಾದ ಮಲ್ಲು ವಾಲಿಕಾರ, ಮಲ್ಲಿಕಾರ್ಜುನ ಗುಡುಬಾ, ಮಲ್ಲು ಚಿಂಚನಸೂರ್, ಸತೀಶ ಇಂಗಳಗಿ, ಶರಣು ನಾಯಿಕೋಡಿ, ಸಚಿನ ಹೋನ್ನಳ್ಳಿ, ಕೃಷ್ಣ, ಸಾಗರ ಚಿಣಮಗೇರಿ, ಪ್ರವೀಣ…

Read More

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಯಲ್ಲಿ ಶಿಕ್ಷಕರ ದಿನಾಚರಣೆ

ಕಲಬುರಗಿ: ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳು ಆಚರಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡ ಪ್ರಾಂಶುಪಾಲರಾದ ಡಾ. ಮೊರಗೆ ಪ್ರಕಾಶ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಗುರು ಮತ್ತು ಶಿಷ್ಯರ ಸಂಬAಧ ಶಿಕ್ಷಣದ ಮಹತ್ವವನ್ನು ಕುರಿತು ಮತ್ತು ಡಾ. ರಾಧಾಕೃಷ್ಣನ್ ಅವರ ಸಾಧನೆ ಮತ್ತು ಶಿಕ್ಷಣಕ್ಕೆ ಅವರು ಕೊಟ್ಟಂತಹ ಕೊಡುಗೆ ಶಿಕ್ಷಣದ ಮಹತ್ವ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದರು. ವೇದಿಕೆ ಮೇಲೆ ಉಪಸ್ಥಿತ ಇದ್ದಂತಹ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ರಾಮಲಿಂಗ…

Read More

ಸ್ನಾತಕೋತ್ತರ ಕೋರ್ಸುಗಳ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಣೆ

ಕಲಬುರಗಿ: ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ)ದಲ್ಲಿ ನಡೆಸಲಾಗುತ್ತಿರುವ ಕಲಾ, ವಾಣಿಜ್ಯ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ನಿಕಾಯಗಳ ವಿವಿಧ ಸ್ನಾತಕೋತ್ತರ ಕೋರ್ಸುಗಳ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವನ್ನು ಸೆ 25 ರವರೆಗೆ ವಿಸ್ತರಿಸಲಾಗಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಸೂಕ್ತ ದಾಖಲೆಗಳೊಂದಿಗೆ ಕಾಲೇಜಿನ ಕಛೇರಿಗೆ ಸಲ್ಲಿಸುವ ಅಂತಿಮ ದಿನಾಂಕ: ೩೦-೦೯-೨೦೨೫ ರವರೆಗೆ ಇರುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ವೆಬ್ ಸೈಟ್ ತಿತಿತಿ.gಛಿಚಿಞ.ಚಿಛಿ.iಟಿ ಗೆ ಭೇಟಿ ನೀಡಲು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಸವಿತಾ ತಿವಾರಿ ಅವರು ತಿಳಿಸಿದ್ದಾರೆ.

Read More

ಜಗತ್ತಿನ ಚುಕ್ಕಾಣಿ ಹಿಡಿಯಬೇಕಾದರೆ ಜ್ಞಾನದ ಸಂಪತ್ತಿನ ಅವಶ್ಯಕತೆ ಇದೆ – ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯ

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಲು ಶಿಕ್ಷಕರಿಗೆ ಸಚಿವರ ಕರೆ *ಹೈಲೈಟ್ಸ್* -ನವೀಕರಣಕ್ಕಾಗಿ ಕೆಕೆಆರ್ ಡಿಬಿ ಯಿಂದ ರೂ 4.80 ಕೋಟಿ ಅನುದಾನ ಬಿಡುಗಡೆ. – ಉನ್ನತ ಗುಣಮಟ್ಟದ ಆಸನ, ಸೌಂಡ್ ಸಿಸ್ಟಂ, ಬಗೆಬಗೆ ಬಣ್ಣದ ಲೈಟಿಂಗ್ ಅಳವಡಿಕೆ. -ಪ್ರೇಕ್ಷಕರಿಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ. – ನೆಲಮಹಡಿಯಲ್ಲಿ 552 ಆಸನಗಳನ್ನು ಹಾಗೂ‌ ಮೊದಲ ಮಹಡಿಯಲ್ಲಿ 303 ಆಸನಗಳನ್ನು ಸೇರಿಸಿ ಒಟ್ಟು 855 ಆಸನಗಳನ್ನು ಹೊಂದಿದೆ. –ನೂತನ ಮಾದರಿಯ ಪುಷ್ ಬ್ಯಾಕ್ ( ಹಿಂದಕ್ಕೆ ತಳ್ಳುವ )…

Read More
error: Content is protected !!